ದೀಪಾವಳಿಗೆ ತಯಾರಿ ನಡೆಸುತ್ತಿದ್ದ ವೇಳೆ ಇಬ್ಬರು ಫೋಟೋಗ್ರಾಫರ್ ಸಾವು..

ಮಂಡ್ಯ: ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಈ ಹಬ್ಬವನ್ನ ಸಂಭ್ರಮ, ಸಡಗರದಿಂದ ಆಚರಿಸಬೇಕು ಅನ್ನೋದು ಎಲ್ಲರ ಆಶಯ. ಆದ್ರೆ ತಮ್ಮ ಸ್ಟುಡಿಯೋದಲ್ಲಿ ದೀಪಾವಳಿ ಆಚರಿಸಬೇಕೆಂದು, ಸಂಭ್ರಮದಿಂದಿದ್ದ ಫೋಟೋಗ್ರಾಫರ್ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ತಮ್ಮ ಸ್ಟುಡಿಯೋದಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಬೇಕೆಂದು, ತಯಾರಿ ಮಾಡುವ ವೇಳೆ ಶಾಕ್ ಹೊಡೆದು ಇಬ್ಬರು ಫೋಟೋಗ್ರಾಫರ್ ಸಾವನ್ನಪ್ಪಿದ ಘಟನೆ ಮಂಡ್ಯದ ಬೆಸಗರಹಳ್ಳಿಯಲ್ಲಿ ನಡೆದಿದೆ. ಮೃತ ಫೋಟೋಗ್ರಾಫರ್‌ನ್ನು ವಿವೇಕ್(45) ಮತ್ತು ಮಧುಸೂದನ್(35) ಎಂದು ಗುರುತಿಸಲಾಗಿದೆ. About The Author Karnataka Tv See author's posts