ಬೆಂಗಳೂರು ಮಹಾ ಮಳೆಗೆ ಜನಜೀವನ ಹೈರಾಣ: ಅನ್ನ- ನೀರಿಗೂ ಪರದಾಟ..!

Banglore news: ಬೆಂಗಳೂರಿನಲ್ಲಿ  ಮಹಾಮಳೆಗೆ  ಜನಜೀವನ  ಹೈರಾಣಾಗಿದೆ. ಮಹದೇವಪುರದಲ್ಲಿ ಮಳೆಯಾರ್ಭಟಕ್ಕೆ ಬೆಳ್ಳಂದೂರು  ಸರ್ಜಾಪುರ ರಸ್ತೆ ಜಲಾವೃತವಾಗಿದೆ. ಹಲವು ಲೇಔಟ್ ಗಳಲ್ಲಿನ ನಿವಾಸಿಗಳಿಗೆ ಜಲದಿಗ್ಬಂದನ ಏರ್ಪಟ್ಟಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ರೈನ್ಬೋ ಲೇಔಟ್, ಕಂಟ್ರಿ ಸೈಟ್ ಸೇರಿದಂತೆ ಹಲವು ಲೇಔಟ್ ಗಳು ಮುಳುಗಡೆಯಾಗಿವೆ. ಕೆರೆಗಳು ತುಂಬಿ ಕೋಡಿ ಹೋಗುತ್ತಿದ್ದು, ಹೆಚ್ಚಿದ ನೀರಿನ ಮಟ್ಟದಿಂದ ಲೇಔಟ್ ಗಳಲ್ಲಿ ಐದಾರು ಅಡಿಗಳಷ್ಟು ನೀರು ತುಂಬಿ ಅವಾಂತರವೇ ಸೃಷ್ಟಿಯಾಗಿದೆ. ಮನೆಗಳಲ್ಲಿನ ವಸ್ತುಗಳೆಲ್ಲವೂ ನೀರು ಪಾಲಾಗಿರುವುದರಿಂದ ಕುಡಿಯಲು, ಬಳಕೆಗೆ ಶುದ್ಧ ನೀರಿಲ್ಲದೆ ನಿವಾಸಿಗಳ ಪರದಾಟ … Continue reading ಬೆಂಗಳೂರು ಮಹಾ ಮಳೆಗೆ ಜನಜೀವನ ಹೈರಾಣ: ಅನ್ನ- ನೀರಿಗೂ ಪರದಾಟ..!