ತಹಶೀಲ್ದಾರ್ ಒಳಗಿದ್ದಾಗಲೇ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ರೈತರು

Dharwad News: ಧಾರವಾಡ: ಬೆಳೆಗೆ ಜಾನುವಾರುಗಳ ಕಾಟದ ಹಿನ್ನೆಲೆ ಧಾರವಾಡದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಶೀಲ್ದಾರ್ ಒಳಗಡೆ ಇದ್ದಾಗಲೇ, ತತಹಶೀಲ್ದಾರ್ ಕಚೇರಿಗೆ ಬೀಗ ಜಡಿದಿದ್ದಾರೆ. ಧಾರವಾಡದ ಸತ್ತೂರು, ನವಲೂರು ಭಾಗದ ರೈತರು ಈ ರೀತಿಯಾಗಿ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆ ಕೂಡ ನಡೆಸಿದ್ದಾರೆ.ರಾತ್ರೋ ರಾತ್ರಿ ತಮ್ಮ ಜಮೀನಿಗೆ ತಡಸಿನಕೊಪ್ಪ ಗ್ರಾಮಸ್ಥರ ಜಾನುವಾರುಗಳು ನುಗ್ಗುತ್ತಿದ್ದು, ಇದರಿಂದಾಗಿ ಈ ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು ಖಂಡಿಸಿ, ರೈತರು ಪ್ರತಿಭಟನೆ ನಡೆಸಿದ್ದು, ಇಲ್ಲಿನ ತಹಶೀಲ್ದಾರ್ ಆದ, ದೊಡ್ಡಪ್ಪ ಹೂಗಾರ್ ಒಳಗಿದ್ದಾಗಲೇ ರೈತರು ಬೀಗ ಹಾಕಿದ್ದಾರೆ. ಬಳಿಕ … Continue reading ತಹಶೀಲ್ದಾರ್ ಒಳಗಿದ್ದಾಗಲೇ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ರೈತರು