Rain : ಕಾರ್ಕಳದಲ್ಲಿ ವಿಪರೀತ ಮಳೆ ಹಲವೆಡೆ ಹಾನಿ..!

Karkala News : ಬಜಗೋಳಿ,ಮಾಳ ಸೇರಿದಂತೆ ಕಾರ್ಕಳ ತಾಲೂಕಿನಾದ್ಯಂತ ಶನಿವಾರ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಜೋರಾಗಿ ಬೀಸಿದ ಗಾಳಿಗೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಹಾನಿಯುಂಟಾಗಿದೆ. ನಂದಳಿಕೆ ಗ್ರಾಮದ ದೇವಾಸ್ಥಾನ ಬಳಿಯ ನಿವಾಸಿ ಸುಬ್ರಹ್ಮಣ್ಯ ಭಟ್‍ರವರ ಮನೆಯ ಮುಂಭಾಗ ಹಾಕಲಾದ ತಗಡು ಶೀಟು ಬಿದ್ದು ಸುಮಾರು 10 ಸಾವಿರಕ್ಕೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಾಗೂ ನಂದಳಿಕೆ ನಿವಾಸಿ ಶಿವಪ್ರಸಾದ್ ರಾವ್ ರವರ ತೋಟದಲ್ಲಿ ತೆಂಗು ಹಾಗೂ ಅಡಿಕೆ ಮರಗಳು ಗಾಳಿಯ ರಭಸಕ್ಕೆ ಧರೆಗೆ … Continue reading Rain : ಕಾರ್ಕಳದಲ್ಲಿ ವಿಪರೀತ ಮಳೆ ಹಲವೆಡೆ ಹಾನಿ..!