ಕಾಸರಗೋಡು: ಬೈಕ್ ಲಾರಿ ನಡುವೆ ಬೀಕರ ಅಪಘಾತ, ಮಹಿಳೆ ಸಾವು

Kasaragod News: ಬೈಕ್‌ನಿಂದ ರಸ್ತೆಗೆಸೆಯಲ್ಪಟ್ಟು, ಲಾರಿಯಡಿಗೆ ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಆದೂರು ಬಳಿ ನಡೆದಿದೆ. ಆದೂರು ಪಾಂಡಿ ಅಂಬಟೆ ಮೂಲೆಯ ಎ.ಕೆ. ಮುಹಮ್ಮದ್ ಅವರ ಪತ್ನಿ ಅಮೀನಾ (೪೫) ಮೃತಪಟ್ಟವರು ಎಂದು ತಿಳಿದು ಬಂದಿದೆ. ಪತಿ ಹಾಗೂ ಮಗುವಿನ ಜೊತೆ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮೆಲೆ ಬ್ರೇಕ್ ಹಾಕಿದ್ದಾರೆ. ಈ ವೇಳೆ ಹಿಂಬದಿಯಲ್ಲಿದ್ದ ಅಮೀನಾ ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಹಿಂದಿನಿಂದ … Continue reading ಕಾಸರಗೋಡು: ಬೈಕ್ ಲಾರಿ ನಡುವೆ ಬೀಕರ ಅಪಘಾತ, ಮಹಿಳೆ ಸಾವು