ಸಾವರ್ಕರ್ ಭಾವಚಿತ್ರ ತೆರವಿನಿಂದ ಶಿವಮೊಗ್ಗದಲ್ಲಿ ಪರಿಸ್ಥಿತಿ ಗಂಭೀರ ಶಿವಮೊಗ್ಗದಲ್ಲಿ 144 ಸೆಕ್ಶನ್ ಜಾರಿ

shivamogga: ಬಿ.ಡಿ ಸಾವರ್ಕರ್ ರವರ ಭಾವ ಚಿತ್ರದ ವಿಚಾರವಾಗಿ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ 2 ಕೋಮುಗಳ ನಡುವೆ ಕಿತ್ತಾಟ ನಡೆದಿದೆ. ಹೀಗೆ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಒಂದು ಗುಂಪು ಟಿಪ್ಪು ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗೆಯೇ ಪರಿಸ್ಥಿತಿ ನಿವಾರಣೆಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಸೆಕ್ಶನ್  144 ನ್ನು ಜಾರಿ ಮಾಡಲಾಗಿದೆ. ಪರಿಸ್ಥಿತಿ ಸಮೋಲನಕ್ಕಾಗಿ ಗಸ್ತು ತಿರುಗುತ್ತಿದ್ದಾರೆ ಪೊಲೀಸರು.