Saturday, July 27, 2024

Latest Posts

ಜೋಗಿ ಪ್ರೇಮ್ ಅವರ ಹೊಸ ಸಿನೆಮಾದ ಸ್ಕ್ರಿಪ್ಟ್ ರೆಡಿ

- Advertisement -

www.karnatakatv.net : ಬೆಂಗಳೂರು : ಧ್ರುವ ಸರ್ಜಾ ಅವರ ಜೋತೆಗೆ ಜೋಗಿ ಪ್ರೇಮ್ ಅವರು ಹೊಸ ಸಿನೆಮಾ ಮಾಡುವದಾಗಿ ಘೋಷಣೆಯನ್ನು ಮಾಡಿದ್ದಾರೆ. ಸದ್ಯದಲ್ಲೆ ಸೆಟ್ಟೆ ಏರಲಿರುವ ಈ ಸಿನೆಮಾ ಗೆದ್ದರೆ ಸಿಂಹಾಸನ, ಹುತಾತ್ಮನಾದರೆ ವೀರ ಸ್ವರ್ಗ ಎಂಬ ಟ್ಯಾಗ್ ಲೈನ್ ನಲ್ಲಿ ಸಿನಿಮಾದ ಒನ್ ಲೈನ್ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.  ಈಗಷ್ಟೆ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಮಾಡಲಾಗಿದ್ದು ಈ ಚಿತ್ರದ ನಾಯಕನಾಗಿ ಧ್ರುವ ಅವರ ಹೆಸರು ಸುದ್ದಿಯಾಗಿದೆ.

‘ಯುದ್ಧದಲ್ಲಿ ಹಿತಾತ್ಮನಾದರೆ ಸ್ವರ್ಗವು ಅವನನ್ನು ಸ್ವಾಗತಿಸುತ್ತದೆ. ಒಂದು ವೇಳೆ ಯುದ್ಧದಲ್ಲಿ ಅವನು ಜಯಗಳಿಸಿದರೆ ಸಿಂಹಾಸನ ಅವನಿಗಾಗಿ ಕಾಯುತ್ತಿರುತ್ತದೆ. ಆದ್ದರಿಂದ ಯುದ್ಧ ಯಾವಾಗಲು  ಒಳ್ಳೆಯದೆ, ಈಗ ಯುದ್ಧ ಆರಂಭವಾಗಿದೆ ‘ ಎಂಬುದು ಈ ಚಿತ್ರದ ಒಂದು ಒಳ್ಳೆಯ  ಸಾಲು ಆಗಿದೆ. ಪಕ್ಕಾ ಮಾಸ ಹಾಗೂ ಸಾಹಸದ ಚಿತ್ರ ಇದಾಗಿದೆ ಎಂದು ತಿಳಿಸಿದರು.

ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು

- Advertisement -

Latest Posts

Don't Miss