ಸಿ ಎಂ ಪರಿಹಾರ ನಿಧಿ ಎನ್ನುವುದು ಒಂದಲ್ಲಾ ಒಂದು ಸಾಮಾಜಿಕ ಕಾರ್ಯಗಳಿಗೆ ಉಪಯೋಗವಾಗುವಂತದ್ದು. ಯಾರು ಕಷ್ಟದಿಂದ ಬಳಲುತ್ತಿರುತ್ತಾರೋ ಅಂತವರಿಗೆ ಸಿ ಎಂ ಪರಿಹಾರ ನಿಧಿಯಿಂದ ಮುಖ್ಯಮಂತ್ರಿಗಳು ನೆರೆವನ್ನು ನೀಡುತ್ತಾರೆ. ಈ ನಿಟ್ಟಿನಲ್ಲಿ ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಮುಂದಾಗಿದ್ದಾರೆ. ನವೀನ್ ಪಟ್ನಾಯಿಕ್ ಅವರು (Odisha CM Naveen Patnaik) ತಮ್ಮ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅಂದಾಜು 80 ಲಕ್ಷ ರೂಪಾಯಿಯನ್ನು ಕ್ರೈಸ್ತರ ಮಿಷನರೀಸ್ ಆಫ್ ಚಾರಿಟೀಸ್ಗೆ ತುರ್ತು ಪರಿಹಾರ ಕೊಡುಗೆ ನೀಡಿದ್ದಾರೆ.
ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಗೆ ಅನುಸಾರವಾಗಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಒಡಿಶಾ ರಾಜ್ಯದಲ್ಲಿ ನೆಲೆಸಿರುವ ಕ್ರೈಸ್ತ ಮಿಷನರಿಗಳಿಗೆ ತಮ್ಮ ನೋಂದಣಿಯನ್ನು ನವೀಕರಣಗೊಳಿಸಲು ನಿರಾಕರಿಸಲಾಗಿತ್ತು. ಹೀಗಾಗಿ ಒಡಿಶಾದ ಕ್ರೈಸ್ತ ಮಿಷನರಿಗಳಿಗೆ ಹಣಕಾಸಿನ ಮುಗ್ಗಟ್ಟು ತಲೆದೋರಿತ್ತು. ಈ ಹಂತದಲ್ಲಿ ನೆರವಿನ ಹಸ್ತ ಚಾಚಿದ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರು ತಕ್ಷಣಕ್ಕೆ 78.76 ಲಕ್ಷ ರೂಪಾಯಿಗಳನ್ನು ತಮ್ಮ ಸಿಎಂ ಫಂಡ್ನಿಂದ ಬಿಡುಗಡೆ ಮಾಡಿದ್ದಾರೆ.