Saturday, July 27, 2024

Latest Posts

ಬಸವಣ್ಣ ನೀಡಿದ ವಾಗ್ದಾನ-ನಿಖಿಲ್ ಗೆಲುವು ಖಚಿತ ಅಂತಿದ್ದಾರೆ ಜನ

- Advertisement -

ಮಂಡ್ಯ:  ಮಂಡ್ಯ ಲೋಕಸಭಾ ಚುನವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸಮೀಕ್ಷಾ ವರದಿ ಹೊರಬಿದ್ದಿವೆ. ಈ ಮಧ್ಯೆ ಚುನಾವಣೆ ಸಮಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ತಮ್ಮ ಗೆಲುವು ಕುರಿತು ಬಸವನ ಪಾದ ಬೇಡಿದ್ದರು. ಈ ವೇಳೆ ಬಸವ ನಿಖಿಲ್ ಕೈ ಮೇಲೆ ಪಾದ ಇಟ್ಟು ಆಶೀರ್ವದಿಸಿದ ವಿಡಿಯೋ ಈಗ ವೈರಲ್ ಆಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊನ್ನಾಯಕನಹಳ್ಳಿ ಗ್ರಾಮದ ಬಸವ ಮಠದ ಬಸವ ಇದಾಗಿದ್ದು, ನಾವು ಏನಾದರೂ ಕೇಳಿಕೊಂಡಾಗ ಬಸವ ತಮ್ಮ ಕೈ ಮೇಲೆ ಪಾದ ಇಟ್ಟರೆ ಇಷ್ಟಾರ್ಥ ನೆರವೇರುತ್ತೆ ಅನ್ನೋ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರ್ ಗೂ ಕೂಡ ಬಸವ ಆಶೀರ್ವಾದ ಮಾಡಿದ್ದು ಚುನಾವಣೆಯಲ್ಲಿ ಅವರ ಗೆಲುವು ನಿಶ್ಚಿತ ಅನ್ನೋ ಲೆಕ್ಕಾಚಾರ ಆರಂಭವಾಗಿದೆ.

ನಿಖಿಲ್ ಬಸವನ ಪಾದ ಬೇಡುತ್ತಿರೋ ವಿಡಿಯೋ ಇಲ್ಲಿದೆ ನೋಡಿ.

https://www.youtube.com/watch?v=eJgPRzNQINA&feature=youtu.be

- Advertisement -

Latest Posts

Don't Miss