Saturday, July 27, 2024

Latest Posts

‘ದಾರಿ ಕಾಣದ ಕಾಂಗ್ರೆಸ್ಸಿಗರಿಗೆ ಬಿಜೆಪಿ ಸರಿ ದಾರಿ ತೋರಿಸುತ್ತೆ’- ಮಾಜಿ ಡಿಸಿಎಂ ಅಶೋಕ್

- Advertisement -

ಬೆಂಗಳೂರು: ಲೋಕಸಭಾ ಚುನಾವಣೆ ಕುರಿತಾದ ಸಮೀಕ್ಷಾ ವರದಿ ಕುರಿತು ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಆರ್.ಅಶೋಕ್ ಪ್ರತ್ರಿಕ್ರಿಯಿಸಿದ್ದಾರೆ.

11 ತಿಂಗಳ ಕಾಲ ಸರ್ಕಾರ ಕೋಮಾ ಸ್ಟೇಜ್ ನಲ್ಲಿತ್ತು. ಆದ್ರೆ ಮೇ 23ರ ಫಲಿತಾಂಶದ ನಂತರ ಡಾಕ್ಟರ್ ಅಧಿಕೃತವಾಗಿ ಈ ಸರ್ಕಾರವನ್ನ ಡೆಡ್ ಅಂತ ಘೋಷಣೆ ಮಾಡ್ತಾರೆ ಅಂತ ಅಶೋಕ್ ವ್ಯಂಗ್ಯವಾಡಿದ್ರು.

ರೋಷನ್ ಬೇಗ್ ಅಸಮಾಧಾನ ಕುರಿತಾಗಿ ಮಾತನಾಡಿದ ಅಶೋಕ್, ಇದು ರೋಷನ್ ಬೇಗ್ ಪ್ರಶ್ನೆಯಲ್ಲ ಸುಮಾರು 20-30ಕ್ಕೂ ಹೆಚ್ಚು ಜನರ ಪ್ರಶ್ನೆ. ದಾರಿ ಕಾಣದೆ ಎಲ್ಲಿಗೆ ಹೋಗಬೇಕೆಂದು ಇಬ್ಬಂದಿಯಾಗಿ ಗೊಂದಲದಲ್ಲಿದ್ದಾರೆ. ಅವರೆಲ್ಲರಿಗೂ ಬಿಜೆಪಿ ಒಂದು ದಾರಿ ತೋರಿಸುತ್ತೆ ಅಂತ ಮಾಜಿ ಡಿಸಿಎಂ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಕೊನೆ ಕ್ಷಣದಲ್ಲಿ ದೇವೇಗೌಡರ ಸಪೋರ್ಟ್ ಯಾರಿಗೆ…?ಈ ವಿಡಿಯೋದಲ್ಲಿದೆ ಸಂಪೂರ್ಣ ಮಾಹಿತಿ. ತಪ್ಪದೆ ನೋಡಿ.

- Advertisement -

Latest Posts

Don't Miss