ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಅಪರೂಪದ ಘಟನೆ ನಡೆದಿದೆ. ಚೆನ್ನೈ ಮೂಲದ ಖಾಸಗಿ ಸಂಸ್ಥೆಯೊಂದು ದುಬಾರಿಯಾದ ದೇಣಿಗೆ ನೀಡಿದೆ. ಸುದರ್ಶನ್ ಎಂಟರ್ಪ್ರೈಸಸ್, ತಿಮ್ಮಪ್ಪನಿಗೆ 2.5 ಕಿಲೋಗ್ರಾಂ ತೂಕದ ಶುದ್ಧ ಚಿನ್ನದಿಂದ ತಯಾರಿಸಲಾದ ಶಂಖ ಮತ್ತು ಚಕ್ರವನ್ನು ದೇಣಿಗೆಯಾಗಿ ಅರ್ಪಿಸಿದೆ. ಇದರ ಮೌಲ್ಯ ₹2.4 ಕೋಟಿ ರೂಪಾಯಿಯಾಗಿದೆ.
ತಿರುಪತಿ ತಿಮ್ಮಪ್ಪ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಭಕ್ತರು ದೇಶದ ಎಲ್ಲ ಭಾಗಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ವೆಂಕಟೇಶ್ವರ ದೇವಾಲಯವನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ನಿರ್ವಹಿಸುತ್ತದೆ. ಭಕ್ತರು ಹಣ, ಚಿನ್ನ, ಬೆಳ್ಳಿ, ನಾಣ್ಯ, ಎತ್ತರದ ಮರಗಳಿಂದ ತಯಾರಿಸಿದ ಬಟ್ಟೆಗಳು, ತೈಲ ಮತ್ತು ಹಲವಾರು ಧಾರ್ಮಿಕ ಸಮಗ್ರಿಗಳನ್ನು ದೇಣಿಗೆಯಾಗಿ ಅರ್ಪಿಸುತ್ತಾರೆ.
ಸುದರ್ಶನ್ ಎಂಟರ್ಪ್ರೈಸಸ್ ಸಂಸ್ಥೆಯು ಸಲ್ಲಿಸಿದ ಶಂಖ ಮತ್ತು ಚಕ್ರ ಸಂಪೂರ್ಣವಾಗಿ ಶುದ್ಧ ಚಿನ್ನದಿಂದ ತಯಾರಿಸಲ್ಪಟ್ಟಿದ್ದು, ಅವು ತಿಮ್ಮಪ್ಪನ ಆರಾಧನಾ ಚಿಹ್ನೆಗಳಾಗಿ ಪ್ರಮುಖ ಸ್ಥಾನ ಪಡೆದಿವೆ. ಇವುಗಳನ್ನ ದೇವಾಲಯದ ರಂಗನಾಯಕುಲ ಮಂಟಪದಲ್ಲಿ ವಿಶಿಷ್ಟ ಕಾರ್ಯಕ್ರಮದೊಂದಿಗೆ ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಯ್ಯ ಚೌದರಿ ಅವರಿಗೆ ಹಸ್ತಾಂತರಿಸಲಾಯಿತು.




