- Advertisement -
ದೇಶಾದ್ಯಂತ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ನಡೆಯುತ್ತಿದೆ. ಆದರೆ ತಮಿಳುನಾಡಿನಲ್ಲಿ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಎದುರಿಸಲು ಹೆದರಿದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ .

ಮಧುರೈನಲ್ಲಿ ಒಬ್ಬ ವಿದ್ಯಾರ್ಥಿನಿ ನೇಣಿಗೆ ಶರಣಾದ್ರೆ, ಧರ್ಮಪುರಿ ಹಾಗೂ ನಮಕ್ಕಲ್ ಜಿಲ್ಲೆಯಲ್ಲಿ ಇಬ್ಬರು ಸೂಸೈಡ್ ಮಾಡಿಕೊಂಡಿದ್ದಾರೆ. ಇನ್ನು ವಿದ್ಯಾರ್ಥಿಗಳ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಮಧುರೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಡೆತ್ ನೋಟ್ ಲಭ್ಯವಾಗಿದೆ. ನಾನು ಎರಡನೆ ಬಾರಿಗೆ ಮೆಡಿಕಲ್ ಎಕ್ಸಾಂ ಎದುರಿಸುತ್ತಿದ್ದೇನೆ. ಆದರೆ ಈ ಬಾರಿಯೂ ನನಗೆ ಮೆಡಿಕಲ್ ಸೀಟ್ ಸಿಗದಿದ್ರೆ ತಂದೆ – ತಾಯಿ ಬೇಸರವಾಗುತ್ತೆ. ಹೀಗಾಗಿ ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಅಂತಾ ಬರೆದಿದ್ದಾಳೆ.

- Advertisement -