Friday, June 20, 2025

Latest Posts

BENGALURU : ಸೈಬರ್ ವಂಚಕರಿಗೆ ಬೆಂಗಳೂರು ಟಾರ್ಗೆಟ್

- Advertisement -

ದೇಶದ ಐಟಿ ಹಬ್‌ ಅಂತಲೇ ಕರೆಯೋ ಬೆಂಗಳೂರನ್ನು ಸೈಬರ್‌ ಖದೀಮರು ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಡಿಜಿಟಲ್‌ ಅರೆಸ್ಟ್‌, ಷೇರು ಹೂಡಿಕೆ, ಪಾರ್ಟ್‌ ಟೈಂ ಜಾಬ್‌ ಸೇರಿದಂತೆ ಹಲವು ಮಾರ್ಗಗಳಲ್ಲಿ ನಾಗರಿಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದು, ಪ್ರತಿ ನಿತ್ಯ ಸರಾಸರಿ 5.4 ಕೋಟಿ ರೂ. ದೋಚುತ್ತಿದ್ದಾರೆ. ಪರಿಣಾಮ ಈ ವರ್ಷ 11 ತಿಂಗಳಲ್ಲಿಯೇ ಬರೋಬ್ಬರಿ 1806 ಕೋಟಿ ರೂ. ವಂಚಕರ ಪಾಲಾಗಿದೆ.

ನಗರ ಪೊಲೀಸರ ಸೈಬರ್‌ ವಂಚನೆ ಕುರಿತ ಜಾಗೃತಿ ಕಾರ್ಯಾಗಾರಗಳು, ಸಾಮಾಜಿಕ ಜಾಲತಾಣಗಳಲ್ಲಿಅರಿವು ಮೂಡಿಸುತ್ತಿರುವುಧಿದರ ನಡುವೆಯೂ ಸೈಬರ್‌ ವಂಚಕರ ಗಾಳಕ್ಕೆ ಪ್ರತಿನಿತ್ಯ ನಾಗರಿಕರು ಗುರಿಯಾಗುತ್ತಿದ್ದಾರೆ. ಐಟಿ ಉದ್ಯೋಗಿಗಳು, ಉನ್ನತ ಅಧಿಕಾರಿಗಳು, ವೈದ್ಯರು, ಗೃಹಿಣಿಯರು, ಪೊಲೀಸರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರು ಸೈಬರ್‌ ವಂಚನೆಗೆ ಒಳಗಾಗಿ 50 ಸಾವಿರ ರೂಪಾಯಿಯಿಂದ 9 ಕೋಟಿ ರೂ.ವರೆಗೆ ಹಣ ಕಳೆದುಕೊಂಡವರಿದ್ದಾರೆ. ಹಣ ಕಳೆದುಕೊಂಡ ಸಂತ್ರಸ್ತರು ಆನ್‌ಲೈನ್‌ ದೂರು ಮಾತ್ರವಲ್ಲದೆ ಠಾಣೆಗಳಲ್ಲಿ ದಿನಂಪ್ರತಿ ಸರಾಸರಿ 48 ದೂರು ದಾಖಲಿಸುತ್ತಿದ್ದಾರೆ. ಹೀಗಾಗಿ, ನವೆಂಬರ್‌ ಅಂತ್ಯಕ್ಕೆ ನಗರದಲ್ಲಿ ಸೈಬರ್‌ ವಂಚನೆ ಸಂಬಂಧ 16,357 ಪ್ರಕರಣಗಳು ದಾಖಲಾಗಿವೆ.

ಷೇರು ಹೂಡಿಕೆ ವ್ಯವಹಾರದಲ್ಲಿ ದುಪ್ಪಟ್ಟು ಲಾಭವಿದೆ ಎಂಬ ನಂಬಿಕೆಯ ಪ್ರಮುಖ ಅಸ್ತ್ರ ಪ್ರಯೋಗಿಸುತ್ತಿರುವ ವಂಚಕರ ಬಲೆಗೆ ವಿದ್ಯಾವಂತರು ಕೂಡ ಬೀಳುತ್ತಿದ್ದಾರೆ. ಈ ಮಾದರಿಯ ವಂಚನೆಯೇ ನಗರದಲ್ಲಿ ಹೆಚ್ಚು ನಡೆದಿದ್ದು, 3,010 ಪ್ರಕರಣಗಳು ದಾಖಲಾಗಿವೆ. 2ನೇ ಸ್ಥಾನದಲ್ಲಿ ಆನ್‌ಲೈನ್‌ ಪಾರ್ಟ್‌ಟೈಮ್‌ ಉದ್ಯೋಗ, ಗೂಗಲ್‌ ರೇಟಿಂಗ್‌ ಮಾದರಿ ವಂಚನೆ ಸಂಬಂಧ 2,697 ಕೇಸ್‌ಗಳು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕೂಡ ‘ಮನ್‌ ಕೀ ಬಾತ್‌’ನಲ್ಲಿ ಡಿಜಿಟಲ್‌ ಅರೆಸ್ಟ್‌ ವಂಚನೆ ಕುರಿತು ಎಚ್ಚರ ವಹಿಸುವಂತೆ ಜನರಿಗೆ ಸಲಹೆ ನೀಡಿದ್ದರು. ಇಷ್ಟಾದರೂ ಡಿಜಿಟಲ್‌ ಅರೆಸ್ಟ್‌ ಎಂಬ ಬೆದರಿಕೆಗೆ ಒಳಗಾಗಿ 1417ಕ್ಕೂ ಅಧಿಕ ಮಂದಿ ಕೋಟ್ಯಂತರ ರೂ. ಕಳೆದುಕೊಂಡಿದ್ದಾರೆ. ಕಾನೂನಿನ ಕುರಿತ ನಾಗರಿಕರಿಗೆ ಇರುವ ಭಯ ಹಾಗೂ ಡಿಜಿಟಲ್‌ ಅನಕ್ಷರತೆ ಕಾರಣಕ್ಕಾಗಿ ಸೈಬರ್‌ ವಂಚಕರ ಆಟಾಟೋಪ ಮುಂದುವರಿದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೈಬರ್‌ ವಂಚನೆ ಸಂತ್ರಸ್ತರು ಬಳಸಿದ ‘ಗೋಲ್ಡನ್‌ ಅವರ್‌’ ಅವಧಿಯಲ್ಲಿಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿರುವ ನಗರ ಪೊಲೀಸರು 600 ಕೋಟಿ ರೂ. ವಂಚಕರು ಲಪಟಾಯಿಸದಂತೆ ತಡೆಯುವಲ್ಲಿಯಶಸ್ವಿಯಾಗಿದ್ದಾರೆ. ಈ ಪೈಕಿ 122 ಕೋಟಿ ರೂ. ಜಪ್ತಿ ಮಾಡಿದ್ದು, ಸಂತ್ರಸ್ತರಿಗೆ ಹಿಂದಿರುಗಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ.

ಸೈಬರ್‌ ವಂಚನೆಗೆ ಒಳಗಾಗಿ ಹಣ ವರ್ಗಾಯಿಸಿರುವುದು ಗೊತ್ತಾಗುತ್ತಿದ್ದಂತೆ ಸಂತ್ರಸ್ತರು ತಕ್ಷಣ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು. ವಂಚನೆ ನಡೆದ ಒಂದು ಗಂಟೆ ಅತ್ಯಂತ ಮಹತ್ವದ್ದಾಗಿದ್ದು, ಈ ಸಮಯದಲ್ಲಿವಂಚಕರು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿರುತ್ತಾರೆ. ಈ ಮಹತ್ವದ ಅವಧಿಯಲ್ಲಿಯೇ ಸಂತ್ರಸ್ತರು ದೂರು ನೀಡಿದರೆ ವಂಚಕರ ಖಾತೆಗಳಲ್ಲಿನ ಹಣವನ್ನು ಫ್ರೀಜ್‌ ಮಾಡಿಸಬಹುದು. ಬಳಿಕ ಸಂಬಂಧಪಟ್ಟ ಬ್ಯಾಂಕ್‌ಗಳ ಜತೆ ಮಾಹಿತಿ ವಿನಿಮಯ ಹಂಚಿಕೊಂಡು ಹಣ ಜಪ್ತಿ ಮಾಡಿ ಕಾನೂನು ಪ್ರಕ್ರಿಯೆಗಳ ಅನ್ವಯ ಕಳೆದುಕೊಂಡವರಿಗೆ ಹಿಂದಿರುಗಿಸಲಾಗುವುದು. ಈ ಪ್ರಕ್ರಿಯೆಯಲ್ಲಿಈ ವರ್ಷ ಮಹತ್ವದ ಮೈಲುಗಲ್ಲುಸಾಧಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

ತಮ್ಮ ವಿಳಾಸದಿಂದ ವಿದೇಶಕ್ಕೆ ಡ್ರಗ್ಸ್‌ ಪಾರ್ಸೆಲ್‌ ಬುಕ್‌ ಆಗಿದೆ ಎಂದು ಮಹಿಳೆಯೊಬ್ಬರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿಸಿದ್ದ ವಂಚಕರು, ಒಂದು ಗಂಟೆಯ ಅವಧಿಯಲ್ಲಿಯೇ 1.21 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದ ಪ್ರಕರಣ ವೈಟ್‌ಫೀಲ್ಡ್‌ ವ್ಯಾಪ್ತಿಯಲ್ಲಿನಡೆದಿದೆ. ಈ ಕುರಿತು ಸಾಫ್ಟ್‌ವೇರ್‌ ಕಂಪನಿಯಲ್ಲಿಉದ್ಯೋಗಿಯಾಗಿರುವ 40 ವರ್ಷದ ರೀನಾ ಪೊಲೀಸರಿಗೆ ದೂರು ನೀಡಿದ್ದಾರೆ. ಥೈವಾನ್‌ಗೆ ನಿಮ್ಮ ಹೆಸರಿನ ಕೊರಿಯರ್‌ನಲ್ಲಿಡ್ರಗ್ಸ್‌ ಪಾರ್ಸೆಲ್‌ ಬುಕ್‌ ಆಗಿದೆಧಿ’ ಎಂದು ಕರೆ ಮಾಡಿದ್ದ ಅಪರಿಚಿತ ವಿಚಾರಣೆ ಸಲುವಾಗಿ ಮುಂಬಧಿಯಿ ಪೊಲೀಸರ ಜತೆ ಸ್ಕೈಪ್‌ ವಿಡಿಯೊದಲ್ಲಿಮಾತನಾಡಿ ಎಂದಿದ್ದ. ಅದರಂತೆ ಸ್ಕೈಪ್‌ ವಿಡಿಯೊದಲ್ಲಿಪೊಲೀಸ್‌ ಯೂನಿಫಾರಂ ಧರಿಸಿದ್ದ ವ್ಯಕ್ತಿ, ಅಕ್ರಮ ಹಣ ವರ್ಗಾವಣೆ ಹಾಗೂ ಡ್ರಗ್ಸ್‌ ಸರಬರಾಜು ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿದ್ದ. ಬಳಿಕ ಬ್ಯಾಂಕ್‌ ಖಾತೆಗಳ ಪರಿಶೀಲನೆ ನೆಪವೊಡ್ಡಿ ಹಂತ-ಹಂತವಾಗಿ 1,21,34,000 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ ಎಂದು ರೀನಾ ದೂರಿನಲ್ಲಿ ವಿವರಿಸಿದ್ದಾರೆ.

- Advertisement -

Latest Posts

Don't Miss