ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಯಾಕಂದ್ರೆ ಮನಮೋಹನ್ ಸಿಮಗ್ ಅಂತ್ಯಕ್ರಿಯೆ ನಡೆದ ನಿಗಮಭೋಧ್ ಘಾಟ್ ಅವ್ಯವಸ್ಥೆಗಳ ಆಗರವಾಗಿತ್ತು.
ಅಂದಹಾಗೆ ಮನಮೋಹನ್ ಸಿಂಗ್ ಅಂತಿಮ ವಿಧಿ ನಡೆಸಲು ಅವ್ರ ಕುಟುಂಬಸ್ಥರಿಗೂ ಸರಿಯಾಗಿ ಆಸ್ಪದ ನೀಡದೇ ಬಿಜೆಪಿ ಸಿಂಗ್ ರನ್ನ ಅವಮಾನಿಸಿದೆ ಅಂತ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆರೋಪ ಮಾಡಿದ್ದಾರೆ. ಇನ್ನು ಇದಕ್ಕೆ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಚಿಕೇಡಿನ ರಾಜಕೀಯ ನಡೆಸ್ತಿದೆ. ಸಾವಿನಲ್ಲೂ ಸಿಂಗ್ ಅವ್ರನ್ನ ಶೋಷಣೆ ಮಾಡ್ತಿದೆ ಅಂತ ಅಂದಿದ್ದಾರೆ.
ಇನ್ನ ಕಾಂಗ್ರೆಸ್ ಆರೋಪ ಏನು ಅಂತ ನೋಡೋದಾದ್ರೆ, ಅಂತ್ಯಕ್ರಿಯೆ ವೇಳೆ ಮೊದಲ ಸಾಲಲ್ಲಿ ಸಿಂಗ್ ಕುಟುಂಬಕ್ಕೆ ಬರೀ 3 ಕುರ್ಚಿ ಇಡಲಾಗಿತ್ತು. ಅಲ್ಲದೇ ಸಿಂಗ್ ಪತ್ನಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸೋ ಸಂದರ್ಭದಲ್ಲಿ ಮೋದಿ ನಿಂತು ಗೌರವ ಸಲ್ಲಿಸಿಲ್ಲ. ಇನ್ನು ಅಂತಿಮ ಯಾತ್ರೆಗೆ ಅಮಿತ್ ಶಾಬೆಂಗಾವಲು ಪಡೆ ಅಡ್ಡಿ, ಅಲ್ಲದೇ ಸಿಂಗ್ ಕುಟುಂಬಸ್ಥರ ಕಾರ್ ಪಾರ್ಕಿಂಗ್ ಗೂ ಸ್ಥಳ ನೀಡಿಲ್ಲ ಅಂತಲೂ ಆರೋಪ ಮಾಡಲಾಗ್ತಿದೆ. ಇನ್ನು ಡಿಡಿ ಬಿಟ್ಟು ಬೇರೆ ಯಾವ ಮಾಧ್ಯಮಗಳಿಗೂ ಪ್ರವೇಶ ನೀಡಿಲ್ಲ ಅಂತ ಕಾಂಗ್ರೆಸ್ ಬಿಜೆಪಿ ವಿರುದ್ದ ಆರೋಪ ಮಾಡ್ತಿದೆ.
ಇತ್ತ ಬಿಜೆಪಿ ಕೂಡ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದೆ. ಮೊದಲ ಸಾಲಿನಲ್ಲಿ 5 ಕುರ್ಚಿ , 2ನೇ ಕುರ್ಚಿ ಸಾಲಲ್ಲಿ 8,3 ಮತ್ತು 4ನೇ ಸಾಲು ಪೂರ್ಣ ಕುಟುಂಬಕ್ಕೆ ಮೀಸಲಿತ್ತು ಅಂತ ಹೇಳಿದ್ದಾರೆ. ಅಲ್ಲದೇ ಇಡೀ ಸಿಂಗ್ ಕುಟುಂಬಕ್ಕೆ ಸಕಲ ಸರ್ಕಾರಿ ಗೌರವ ನೀಡಲಾಗಿತ್ತು. ಅಲ್ಲದೇ ಕ್ರಿಯಾ ವಿಧಿ ನಡೆಸುವವರಿಗೆ ಜಾಗ ನೀಡಲಾಗಿತ್ತು. ಇನ್ನು ಮೆರವಣಿಗೆಗೂ ಯಾವುದೇ ತೊಡಕಾಗಿಲ್ಲ, ಕಾರ್ ಪಾರ್ಕಿಂಗ್ ಗೂ ಜಾಗ ನಿಗದಿಪಡಿಸಲಾಗಿತ್ತು. ಮೆರವಣಿಗೆಗೂ ಯಾವುದೇ ತೊಂದರೆ ಆಗದಂತೆ , ಕಾರ್ ಪಾರ್ಕಿಂಗ್ ಗೂ ಜಾಗ ನಿಗದಿಪಡಿಸಿ, ಪಾಸ್ ಕೂಡ ವಿತರಿಸಲಾಗಿತ್ತು ಎಂದಿದ್ದಾರೆ. ಇನ್ನು ಡಿಡಿ ಪ್ರಸಾರಕ್ಕೂ ಸಂಬಂಧ ಇಲ್ಲ. ಹಿಂದೆಯೂ ಸರ್ಕಾರಿ ಕಾರ್ಯಕ್ರಮ ಡಿಡಿ ಮಾತ್ರವೇ ಪ್ರಸಾರ ಮಾಡಿದೆ ಅಂತ ಬಿಜೆಪಿ ಕಾಂಗ್ರೆಸ್ ಆರೋಪಕ್ಕೆ ಸ್ಪಷ್ಟನೆ ನೀಡಿದೆ.