Sunday, June 1, 2025

Latest Posts

ಒಬ್ರೂ ಉಳಿಯಬಾರದು ಪಾಕಿಗಳನ್ನು ಹೊರಹಾಕಿ : ಸಿಎಂಗಳಿಗೆ ಅಮಿತ್‌ ಶಾ ಸೂಚನೆ

- Advertisement -

ನವದೆಹಲಿ : ಭಯೋತ್ಪಾದಕರಿಂದ ಪಹಲ್ಗಾಮ್‌ ದಾಳಿ ನಡೆಸಿರುವ ಪಾಕಿಸ್ತಾನಕ್ಕೆ ಭಾರತ ಒಂದೊಂದರಂತೆ ಹೊಡೆತ ನೀಡುತ್ತಿದ್ದು, ಇದೀಗ ಎಲ್ಲ ಪಾಕಿಸ್ತಾನಿಗಳು ದೇಶ ತೊರೆಯುವ ನಿಟ್ಟನಲ್ಲಿ ಕೇಂದ್ರ ಸರ್ಕಾರ ಸೂಚಿಸಿದೆ. ಅಲ್ಲದೆ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.

ಎಲ್ಲರೂ ನಮ್ಮೊಂದಿಗೆ ಸಮನ್ವಯ ಸಾಧಿಸಿ, ಪಾಕಿಸ್ತಾನಿ ಪ್ರಜೆಗಳು ಶೀಘ್ರ ಅವರ ದೇಶಕ್ಕೆ ಮರಳುವಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಪಾಕಿಸ್ಥಾನ​ ಪ್ರಜೆಗಳು ಭಾರತ ತೊರೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯದಲ್ಲಿಯೂ ಅನಧಿಕೃತವಾಗಿ ವಾಸವಾಗಿರುವ ಪಾಕಿಸ್ತಾನದ​ ಪ್ರಜೆಗಳ ವಿರುದ್ಧ ಕೈಗೊಳ್ಳಲಾಗುವುದು. ಸ್ಲೀಪರ್ ಸೆಲ್​​ಗಳ ಪತ್ತೆ ಮಾಡುವ ಕಾರ್ಯವನ್ನುಮಾಡಲಾಗುತ್ತಿದೆ. ಅವುಗಳು ಕಂಡುಬಂದರೆ ಎನ್‌ಐಎಗೆ ಮಾಹಿತಿ ನೀಡುತ್ತೇ ಎಂದು ಅವರು ಹೇಳಿದ್ದಾರೆ.

27 ಲಾಸ್ಟ್‌ ಡೇಟ್..

ಬಹುತೇಕ ಪ್ರವಾಸಿಗರು ಸೇರಿದಂತೆ 26 ಮಂದಿಯನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ, ಇದೇ ಏಪ್ರಿಲ್ 27 ರಿಂದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ರದ್ದುಗೊಳಿಸುವುದಾಗಿ ಭಾರತ ಘೋಷಿಸಿತ್ತು. ಅದರ ಜೊತೆಗೆ ಪಾಕಿಸ್ತಾನದಲ್ಲಿ ವಾಸಿಸುವ ಭಾರತೀಯ ಪ್ರಜೆಗಳು ಆದಷ್ಟು ಬೇಗನೆ ತವರುದೇಶಕ್ಕೆ ಮರಳುವಂತೆ ಸಲಹೆ ನೀಡಲಾಗಿದೆ.

ಗೃಹ ಇಲಾಖೆ ನಿರ್ದೇಶನ ನೀಡಿದೆ..

ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಪಹಲ್ಗಾಮ್‌ನಲ್ಲಿ ಹೆಚ್ಚಾಗಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಿರಾಯುಧ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿದ್ದಾರೆ. ಭಾರತ ಸರ್ಕಾರ ಈ ಬಗ್ಗೆ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಲ್ಪಾವಧಿಯ ವೀಸಾ ಹೊಂದಿರುವವರ ವೀಸಾಗಳನ್ನು ರದ್ದುಗೊಳಿಸಬೇಕೆಂದು ನಮಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ ಎಂದಿದ್ದಾರೆ. ಇದಾದ ಬಳಕ ಪಾಕಿಸ್ತಾನಕ್ಕೆ ಬಿಗ್‌ ಶಾಕ್‌ ನೀಡಿರುವ ಭಾರತ, ಎಲ್ಲಾ 17 ರೀತಿಯ ಪಾಕಿಸ್ತಾನದ ವೀಸಾಗಳನ್ನು ರದ್ದುಗೊಳಿಸಿ ಆದೇಶಿಸಿದ್ದು, ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳಿಗೆ ಸಂಕಷ್ಟ ಶುರುವಾಗಿದೆ.

ಎಲ್ಲಾ ವೀಸಾಗಳು ರದ್ದು..!

ಅಲ್ಲದೆ ಪಾಕಿಗಳಿಗೆ ಭಾರತ ನೀಡಿರುವ ಎಲ್ಲಾ ಮಾನ್ಯತೆ ಪಡೆದಿರುವ ವೀಸಾಗಳು ಏಪ್ರಿಲ್‌ 27ರಿಂದ ಅಮಾನ್ಯಗೊಳ್ಳಲಿವೆ. ವೈದ್ಯಕೀಯ ವೀಸಾಗಳು ಏಪ್ರಿಲ್‌ 29ರ ತನಕವಷ್ಟೇ ಮಾನ್ಯವಾಗಿರುತ್ತವೆ. ಗುರುವಾರವಷ್ಟೇ ಭಾರತವು ಪಾಕಿಸ್ತಾನಿಗಳಿಗೆ ನೀಡಲಾಗಿದ್ದ ಸಾರ್ಕ್ ವೀಸಾವನ್ನು ರದ್ದುಗೊಳಿಸಿತ್ತು. ಇನ್ನೂ ಪಹಲ್ಗಾಮ್ ಘಟನೆ ಹಿನ್ನೆಲೆ ಪಾಕ್ ಸರ್ಕಾರದ ಅಧಿಕೃತ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಭಾರತ ಸರ್ಕಾರದ ಮನವಿ ಮೇರೆಗೆ ಎಕ್ಸ್‌, ಪಾಕ್ ಸರ್ಕಾರದ ಖಾತೆ ಅಮಾನತು ಮಾಡಿದೆ. ಹೀಗಾಗಿ ಭಾರತದಲ್ಲಿ ಇನ್ಮುಂದೆ ಪಾಕಿಸ್ತಾನದ ಎಕ್ಸ್ ಖಾತೆಯನ್ನು ಬಳಕೆದಾರರಿಗೆ ನೋಡಲು ಸಾಧ್ಯವಾಗುವುದಿಲ್ಲ.

- Advertisement -

Latest Posts

Don't Miss