Wednesday, August 20, 2025

Latest Posts

ರಂಗಾಯಣ ರಘು ಬಿಚ್ಚಿಟ್ರು ಆ ಸತ್ಯ – ವಿಷ್ಣುವರ್ಧನ್ ಸ್ಮಾರಕ ವಿವಾದ ರಘು ಪ್ರತಿಕ್ರಿಯೆ!

- Advertisement -

ಕನ್ನಡ ಚಿತ್ರರಂಗದ ಮೇರು ನಟ. ಅಭಿಮಾನಿಗಳಿಗೆ ಪ್ರೀತಿಯ ದಾದಾ. ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ. ಕಾನೂನಿನ ಪ್ರಕಾರವೇ ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಆಗಿದೆ ಅಂತ ಹಿರಿಯ ನಟ ರಂಗಾಯಣ ರಘು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅವರ ಸಮಾಧಿ ಇತ್ತು. ಅದು ಅಭಿಮಾನಿಗಳಿಗೆ ಪುಣ್ಯಸ್ಥಳವಂತಿತ್ತು. ಅವರ ನೆನಪಿಗಾಗಿ ಪ್ರತಿ ವರ್ಷ ಅನೇಕ ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದರು. ಆದರೆ ಇತ್ತೀಚೆಗೆ, ಈ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಪೊಲೀಸರ ಸಮ್ಮುಖದಲ್ಲೇ ತೆರವು ಕಾರ್ಯ ಆಗಿದ್ದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯ ನಟ ರಂಗಾಯಣ ರಘು ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಆಗಿದೆ ಅಂತಾ ಹೇಳ್ತಾರೆ. ಆಗಿದ್ದರೆ, ಅದು ಕಾನೂನಿನ ಪ್ರಕಾರವೇ ಆಗಿದೆ ಅಂದರ್ಥ. ಅವರು ತಮ್ಮ ಮಾತುಗಳಲ್ಲಿ ಯಾವುದೇ ಒತ್ತಡವಿಲ್ಲದೇ, ಶಾಂತವಾಗಿ ಈ ವಿಷಯವನ್ನು ವಿವರಿಸಿದ್ದಾರೆ.

ವಿಷ್ಣು ಸರ್ ಹೆಚ್ಚು ಸಮಯ ಕಳೆದಿದ್ದು ಭಾರತಿ ಮೇಡಂ ಜೊತೆ. ಈಗಲೂ ಭಾರತಿ ಮೇಡಂ ಇದ್ದಾರೆ. ಅಳಿಯ, ಮಕ್ಕಳು ಇದ್ದಾರೆ. ತಾವು ಹೇಗಿರಬೇಕು ಎಂಬುದನ್ನೆಲ್ಲ ವಿಷ್ಣುವರ್ಧನ್ ಅವರು ಭಾರತಿ ಮೇಡಂ ಬಳಿ ಹೇಳಿದ್ದಾರೆ. ಅದಕ್ಕಾಗಿಯೇ ಅವರು ಮೈಸೂರಿನಲ್ಲಿ ಸ್ಮಾರಕ ಮಾಡಿದ್ದಾರೆ. ಬಾಲಣ್ಣ ಅವರ ಸ್ಟುಡಿಯೋ ಜಾಗ ಆದ್ದರಿಂದ ಕಾನೂನಿಕ ಸಮಸ್ಯೆ ಆಗಿದೆ ಎಂದು ರಂಗಾಯಣ ರಘು ಹೇಳಿದ್ದಾರೆ.

ಇಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಅಂತ ಹೇಳೋಕೆ ಆಗಲ್ಲ. ರಾತ್ರೋರಾತ್ರಿ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಿದ್ದಾರೆ ಅಂತ ಹೇಳುತ್ತಾರೆ. ಪೊಲೀಸರು ಬಂದಿದ್ದಾರೆ ಎಂದರೆ ಕಾನೂನಿನ ಪ್ರಕಾರವೇ ಆಯಿತಲ್ಲ. ಇಂಥ ಕಡೆ ಸಮಾಧಿ ಇರಬೇಕು ಎಂಬ ಆಸೆ ಅಭಿಮಾನಿಗಳಿಗೆ ಸಹಜ. ಆದರೆ ಅದಕ್ಕೆ ಕಾನೂನಾತ್ಮಕವಾಗಿ ಕೂಡ ಎಲ್ಲವೂ ಸರಿಯಾಗಿ ಇರಬೇಕು ಎಂದು ನಟ ರಂಗಾಯಣ ರಘು ಹೇಳಿದ್ದಾರೆ.

- Advertisement -

Latest Posts

Don't Miss