ರೇಣುಕಾಸ್ವಾಮಿ ಕೊಲೆ ಕೇಸಲ್ಲಿ, ನಟ ದರ್ಶನ್ ಅಂಡ್ ಗ್ಯಾಂಗ್ ಮತ್ತೆ ಜೈಲು ಪಾಲಾಗಿದೆ. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ, ತಕ್ಷಣವೇ ಬಂಧಿಸುವಂತೆ ಸೂಚಿಸಿತ್ತು. ದರ್ಶನ್ ಬೇಲ್ ರದ್ದಾಗಲು ಪ್ರಾಸಿಕ್ಯೂಷನ್ ಪರ ವಕೀಲರ ಪ್ರಬಲ ವಾದ ಮಂಡನೆಯೇ ಕಾರಣ.
ಪ್ರಾಸಿಕ್ಯೂಷನ್ ಪರ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿದ್ದು, ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ. ಸುಪ್ರೀಂಕೋರ್ಟ್ ನಲ್ಲಿ ಸಾಕಷ್ಟು ವರ್ಷಗಳಿಂದ ವಾದಿಸಿದ ಅನುಭವ ಸಿದ್ದಾರ್ಥ ಲೂತ್ರಾ ಅವರಿಗಿದೆ. ದರ್ಶನ್ ವಿರುದ್ಧದ ಕೊಲೆ ಕೇಸ್ , ಕಿಡ್ನ್ಯಾಪ್ ಆರೋಪ, ಸಾಕ್ಷ್ಯ ನಾಶ ಸೇರಿದಂತೆ, ಎಲ್ಲವನ್ನೂ ನ್ಯಾಯಮೂರ್ತಿಗಳಿಗೆ, ಮನವರಿಕೆ ಮಾಡಿಕೊಟ್ಟಿದ್ದು ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ.
ಲೂತ್ರಾ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ, ನಟ ದರ್ಶನ್ ವಿರುದ್ಧದ ಆರೋಪಗಳ ಬಗ್ಗೆ, ಎಲ್ಲಾ ಮಾಹಿತಿಯನ್ನು ನೀಡಿದ್ದು, ಕರ್ನಾಟಕದ ಹಿರಿಯ ವಕೀಲ ಪ್ರಸನ್ನ ಕುಮಾರ್. ಬೆಂಗಳೂರಿನ ಕೆಳ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರಾಗಿ ವಾದ ಮಂಡಿಸುತ್ತಿದ್ದಾರೆ.
ನಟ ದರ್ಶನ್ ಜಾಮೀನು ರದ್ದಾದ ಸಂಪೂರ್ಣ ಕ್ರೆಡಿಟ್, ವಕೀಲರಾದ ಸಿದ್ದಾರ್ಥ್ ಲೂತ್ರಾ ಮತ್ತು ಪ್ರಸನ್ನ ಕುಮಾರ್ ಅವರಿಗೆ ಸಲ್ಲುತ್ತದೆ. ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ, ಸುಪ್ರೀಂಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಿದ ಮೇಲೆ, ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ ಮತ್ತು ಪ್ರಸನ್ನಕುಮಾರ್, ಸಿಜೆಐ ಕೋರ್ಟ್ ಮುಂದೆ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವಂತೆ, ಪೊಲೀಸ್ ಇಲಾಖೆಗೆ ಹಿರಿಯ ವಕೀಲ ಪ್ರಸನ್ನ ಕುಮಾರ್ ಸಲಹೆ ನೀಡಿದ್ದರು. ಈ ಸಲಹೆ ಆಧಾರದ ಮೇಲೆ ಹಿಂದಿನ ಪೊಲೀಸ್ ಕಮೀಷನರ್ ದಯಾನಂದ್, ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಬಳಿಕ ಸುಪ್ರೀಂಕೋರ್ಟ್ನಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ಓರ್ವ ಅನುಭವಿ, ಹಿರಿಯ ವಕೀಲರು ಬೇಕೆಂಬ ಕಾರಣದಿಂದ, ಸಿದ್ದಾರ್ಥ್ ಲೂತ್ರಾರನ್ನು, ಬೆಂಗಳೂರು ಪೊಲೀಸರು ನೇಮಿಸಿಕೊಂಡಿದ್ದರು.
ಹೀಗಾಗಿ ಸಿದ್ದಾರ್ಥ್ ಲೂತ್ರಾ ಅವರಿಗೆ, ಕೇಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಪ್ರಬಲ ವಾದ ಮಂಡನೆಗೆ ನೆರವಾಗಿದ್ದು, ಹಿರಿಯ ವಕೀಲ ಪ್ರಸನ್ನ ಕುಮಾರ್ . ಹಿರಿಯ ವಕೀಲರಾದ ಸಿದ್ದಾರ್ಥ್ ಲೂತ್ರಾ ಮತ್ತು ಪ್ರಸನ್ನ ಕುಮಾರ್ ಅಂಡ್ ಟೀಮಿನ ವಾದಮಂಡನೆಯ ಕಾರಣದಿಂದಲೇ, ನಟ ದರ್ಶನ್ ಅಂಡ್ ಟೀಮ್ ನ ಜಾಮೀನು ರದ್ದಾಗಿದೆ.