ರಾಯರ ದರ್ಶನಕ್ಕೆ ಅವಕಾಶ…

www.karnatakatv.net- ಮಂತ್ರಾಲಯ- ಇಂದಿನಿಂದ ಮಂತ್ರಾಲಯದಲ್ಲಿರುವ ರಾಯರ ಸನ್ನಿಧಿಯನ್ನ ತೆರೆಯಲಾಗಿದೆ. ಭಕ್ತಾದಿಗಳಿಗೆ ಗುರುರಾಯರ ದರ್ಶನಕ್ಕೆ ಅವಕಾಶ ಒದಗಿಸಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9 ಗಂಟೆವೆರಗೂ ಭಕ್ತಾದಿಗಳಿಗೆ ರಾಯರ ದರ್ಶನ ಭಾಗ್ಯ ಸಿಗಲಿದೆ. ಕೊವಿಡ್ ಕಾರಣದಿಂದಾಗಿ ದೇವಾಲಯವನ್ನ ಮುಚ್ಚಲಾಗಿತ್ತು. ಇದೀಗ ಕೊವಿಡ್ ನಿಯಂತ್ರಣಕ್ಕೆ ಬಂದಿರುವ ಸಲುವಾಗಿ ದೇಗುಲವನ್ನ ತೆರೆಯಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಕೋವಿಡ್ ನಿಯಮವನ್ನ ಪಾಲಿಸಿದ್ರೆ ಮಾತ್ರ ಒಳಗಡೆ ಪ್ರವೇಶವಿದ್ದು, ಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆಯನ್ನ ನಿಷೇಧಿಸಲಾಗಿದೆ.

About The Author