ವಿದ್ಯಾರ್ಥಿ ಸೋಗಿನಲ್ಲಿ ವಂಚಿಸುತ್ತಿದ್ದ ಉಗಾಂಡಾ ಮೂಲದ ಯುವಕನ ಬಂಧನ…!

www.karnatakatv.net ಹುಬ್ಬಳ್ಳಿ: ವಿದ್ಯಾರ್ಥಿ ಸೋಗಿನಲ್ಲಿ ವಿದ್ಯಾನಗರಿ ಧಾರವಾಡ ಸೇರಿಕೊಂಡಿದ್ದ ಉಗಾಂಡ ಮೂಲದ ವಿದ್ಯಾರ್ಥಿಯೊಬ್ಬ ಸ್ಥಳೀಯ ಯುವಕರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಯುತ್ತಿದ್ದ, ಬಳಿಕ ಲಕ್ಷಾಂತರ ರೂ. ಅನಧಿಕೃತವಾಗಿ ಚಲಾವಣೆ ಮಾಡಿ ವಂಚಿಸುತ್ತಿದ್ದ, ಈ ಆರೋಪದಡಿ ಆತನನ್ನು ಹುಬ್ಬಳ್ಳಿ- ಧಾರವಾಡ ಸೈಬರ್‌ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಗಾಂಡ ದೇಶದ ದೇವಾಸ್ ಎಂಬಾತ ಧಾರವಾಡದ ನರ್ಸಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ 2018ರಲ್ಲಿ ಕಲಘಟಗಿ ಮೂಲದ ಯುವಕನೊಬ್ಬನಿಗೆ ಇನ್‌ಸ್ಟಾಗ್ರಾಮ್ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದ. ನಿರಂತರವಾಗಿ ಸಂಪರ್ಕದಲ್ಲಿದ್ದು ಸ್ನೇಹ, ನಂಬಿಕೆ ಗಳಿಸಿಕೊಂಡಿದ್ದ.

2019 .ಮೇ 3ರಂದು ದೇವಾಸ್ ಇನ್‌ಸ್ಟಾಗ್ರಾಮ್ ಸ್ನೇಹಿತನಿಗೆ ಕರೆ ಮಾಡಿದ್ದ. ‘ತಾನು ಮತ್ತು ತನ್ನ ಗೆಳೆಯ ಎಂ.ಆರ್‌. ಯೂಪ ಇಬ್ಬರೂ ಎನ್‌ಆರ್‌ಐ (ಅನಿವಾಸಿ ಭಾರತೀಯರು) ಇದ್ದು, ನಾವು ವ್ಯಾಸಂಗ ಮಾಡುತ್ತಿರುವಕಾಲೇಜ್‌ನವರಿಗೆ ಕಾಲೇಜ್ ಶುಲ್ಕ ಮತ್ತು ಪರೀಕ್ಷೆ ಶುಲ್ಕವನ್ನು ಬ್ಯಾಂಕ್ ಖಾತೆಯ ಮುಖಾಂತರವೇ ವರ್ಗಾವಣೆ ಮಾಡಬೇಕಿದೆ. ಹಾಗಾಗಿ ಸ್ಥಳೀಯವಾಗಿ ಬ್ಯಾಂಕ್ ಖಾತೆ ತೆರೆದು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು.

ಇವರಿಗೆ ಸಹಾಯ ಮಾಡಲೆಂದು ಯುವಕ ತನ್ನ ಹಾಗೂ ತನ್ನ ಸಹೋದರನ ಹೆಸರಲ್ಲಿ ಧಾರವಾಡದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು. ಆ ಸ್ಥಳೀಯ ಯುವಕರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಸಿ ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪದಡಿ ಉಗಾಂಡ ಮೂಲದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಈತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಡಿಸಿಪಿ ಕಾನೂನು ಸುವ್ಯವಸ್ಥೆ  ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಖಾತೆಗಳಿಗೆ ದೇವಾಸ್ ನೀಡಿದ್ದ ಮೊಬೈಲ್ ಫೋನ್ ನಂಬರ್ ಗಳನ್ನೇ ಲಿಂಕ್ ಮಾಡಿಸಿದ್ದರು. ಹೀಗೆ ದೇವಾಸ್ ಸ್ಥಳೀಯ ಯುವಕನ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಅನಧಿಕೃತವಾಗಿ ಹಣ ವರ್ಗಾವಣೆ ಮಾಡಲು ದುರ್ಬಳಕೆ ಮಾಡಿಕೊಂಡಿದ್ದ ಎಂದು ಕಲಘಟಗಿ ಮೂಲದ ಯುವಕ ಫೆಬ್ರವರಿ 28ರಂದು ದೂರು ನೀಡಿದ್ದರು.

ಉಗಾಂಡ ಮೂಲದ ದೇವಾಸ್ ವಿದ್ಯಾರ್ಥಿ ಸೋಗಿನಲ್ಲಿ ವಿದ್ಯಾನಗರಿ ಧಾರವಾಡದಲ್ಲಿ ಬಂದು ನೆಲೆಸಿದ್ದ, ಸೈಬರ್ ಅಪರಾಧ ಕೃತ್ಯಕ್ಕಾಗಿ ಸ್ಥಳೀಯ ಯುವಕರ ಸ್ನೇಹ ಸಂಪಾದಿಸಿಕೊಂಡು ಅವರ ಹೆಸರಲ್ಲಿ ಬ್ಯಾಂಕ್ ಖಾತ ತೆರೆದು ವಂಚಿಸುತ್ತಿದ್ದ, ಲಕ್ಷಾಂತರ ರೂಪಾಯಿ ವರ್ಗಾವಣ ಮಾಡಿಕೊಂಡಿದ್ದ ಎನ್ನಲಾಗಿದೆ. ಉಗಾಂಡ ವಿದ್ಯಾರ್ಥಿ ಇದೇ ರೀತಿ ಹಲವು ಸ್ಥಳೀಯರ ಸ್ನೇಹ ಗಳಿಸಿ, ಅವರ ಹೆಸರಲ್ಲಿ ಹಲವು ಬ್ಯಾಂಕ್ ಖಾತೆ ತೆರೆದು ವಂಚಿಸಿದ್ದಾನೆ ಎನ್ನಲಾಗಿದೆ. ಈತನ ಹಿಂದೆ ಬೃಹತ್ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕ ಟಿವಿ, ಹುಬ್ಬಳ್ಳಿ

About The Author