Thursday, June 19, 2025

Latest Posts

ಹೆಬ್ಬಾಳ್ಕರ್ ಹಾಗೂ ಡಿಕೆಶಿ ರಜತ್ ಉಳ್ಳಾಗಡ್ಡಿಮಠ ಕಿಸೆಯಲ್ಲಿ..!

- Advertisement -

www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಿನ್ನೆಯಷ್ಟೇ ನಾಯಕರು ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಆದರೆ ವಿಪರ್ಯಾಸಕರ ಸಂಗತಿ ಅಂದರೆ ಕಾರ್ಯಕ್ರಮದ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಹಾದಿ-ಬೀದಿ ರಂಪಾಟ ಪ್ರಾರಂಭವಾಗಿದೆ.

ಹೌದು.. ಕಾಂಗ್ರೆಸ್ ವಲಯದಲ್ಲಿ ಟಿಕೆಟ್ ವಿಚಾರದಲ್ಲಿ ಈಗಿನಿಂದಲೇ ಕಿತ್ತಾಟ ಶುರುವಾಗಿದೆ. ಕಾಂಗ್ರೆಸ್ ಉಸ್ತುವಾರಿ ಸಮ್ಮುಖದಲ್ಲೇ ಆರೋಪ ಪ್ರತ್ಯಾರೋಪ ನಡೆದಿದ್ದು, ಮುಖಂಡರ ವಾಗ್ವದ ಕೇಳಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ದಂಗಾಗಿ ಹೋಗಿದ್ದಾರೆ. ಇನ್ನೂ ರಜತ ಉಳ್ಳಾಗಡ್ಡಿಮಠ ಅವರು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಸಂಬಂಧಿಯಾಗಿದ್ದು, ಲಕ್ಷ್ಮೀ ಹೆಬ್ಬಾಳ್ಕರ ಹಾಗೂ ಡಿ.ಕೆ.ಶಿವುಕುಮಾರ ಅವರು ನನ್ನ ಕಿಸೆಯಲ್ಲಿದ್ದಾರೆ ಎಂದು ರಜತ ಉಳ್ಳಾಗಡ್ಡಿಮಠ ಎನ್ನುತ್ತಾರೆ ಎಂದು ಈ ಬಗ್ಗೆ ಗಿರೀಶ ಗದಿಗೆಪ್ಪಗೌಡ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸಮಾಲೋಚನೆ ಸಭೆಯಲ್ಲಿ ವಾಗ್ವಾದ ನಡೆದ ವೀಡಿಯೋ ವೈರಲ್ ಆಗಿದ್ದು, ನಿನ್ನೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಸಮ್ಮುಖದಲ್ಲೇ ವಾಗ್ವಾದ ನಡೆದಿದೆ. ಅಲ್ಲದೇ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಬಗ್ಗೆ ಆಕ್ಷೇಪ ಕೇಳಿ ಬಂದಿದೆ.

- Advertisement -

Latest Posts

Don't Miss