Saturday, July 5, 2025

Latest Posts

ಮಾಜಿ ಸಿಎಂ,ಕೇಂದ್ರ ಸಚಿವರಿದ್ದರೂ ಆಗಿಲ್ಲ: ನೂತನ ಸಚಿವರಾದರೂ ಧೂಳು ಮುಕ್ತ ಮಾಡುತ್ತಾರೆಯೇ?

- Advertisement -

www.karnatakatv.net : ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತೀ ದೊಡ್ಡ ನಗರ ಎನ್ನುವ ಖ್ಯಾತಿ ಪಡೆದಿರುವ ನಗರ. ಅಷ್ಟೇ ಏಕೆ ಆ ನಗರ ಸುಂದರ ಹಾಗೂ ಅಭಿವೃಧಿ ಹೊಂದಲಿ ಅಂತ  ಸ್ಮಾರ್ಟ್​ ಸಿಟಿ ಯೋಜನೆ ಘೋಷಣೆಯಾಗಿತ್ತು. ಆದರೆ ಇಲ್ಲಿಯವರೆಗೆ ಯಾವ ಕಾಮಗಾರಿಯೂ ಮುಗಿದಿಲ್ಲ. ಎಲ್ಲೆಂದರಲ್ಲಿ ರಸ್ತೆಗಳು ಅಗೆದು ಜನರನ್ನು ಹೈರಾಣ ಮಾಡುತ್ತಿವೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಸುರಿದ ಮಳೆ, ಆ ರಸ್ತೆಗಳ ಪರಸ್ಥತಿಯನ್ನೇ  ಹಾಳು ಮಾಡಿವೆ.  ಜನರು ಈ ರಸ್ತೆಗಳಲ್ಲಿ ಪ್ರಯಾಣ ಮಾಡುವುದಕ್ಕೂ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣ ಮಾಡುವಂತೆ ಮಾಡಿದೆ. ಹೀಗಾಗೇ ಸದ್ಯ ನೂತನ ಸಚಿರಾದರೂ ಧೂಳು ಮುಕ್ತ ಮಾಡುತ್ತಾರೆಯೇ ಎಂದು ಜನ ಕಾಯ್ತಿದ್ದಾರೆ

ಹೌದು.. ಹುಬ್ಬಳ್ಳಿ-ಧಾರವಾಡ ಅವಳಿನಗರ ರಾಜ್ಯದ ಅತಿದೊಡ್ಡ ನಗರಗಳು. ಅಲ್ಲದೇ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆಯೂ ಹೌದು. ಹೀಗಾಗಿಯೇ ಇದನ್ನು ವಾಣಿಜ್ಯ ನಗರಿ ಛೋಟಾ ಮುಂಬಯಿ ಅಂತಲೂ ಕರೆಯುತ್ತಾರೆ.  ಯಾಕೆಂದರೆ ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳು ವ್ಯಾಪರ ವಹಿವಾಟಿಗೆಂದು ಇದೇ ನಗರವನ್ನೇ ಮೆಚ್ಚಿಕೊಂಡಿವೆ. ಆದರೆ ಈ ನಗರದ ರಸ್ತೆಗಳ ಪರಸ್ಥತಿ ಕೇಳಿದ್ರೆ ಎಂಥವರು ಛೀ..ಥೂ..ಎನ್ನವಂತಿದೆ. ಕಳೆದೊಂದು ದಶಕದಿಂದಲೂ ಇಲ್ಲಿನ ರಸ್ತೆಗಳ ಪರಸ್ಥಿತಿ ಬದಲಾವಣೆ ಆಗ್ತಿಲ್ಲ.

ಅಲ್ಲದೆ ಕಳೆದ ಮೂರು ವರ್ಷಗಳ ಹಿಂದೆ ನಗರದ ರಸ್ತೆಗಳು ಹಾಗೂ ನಗರ ಅಭಿವೃಧಿ ಪಡೆಸಲು ಸ್ಮಾರ್ಟ್​ ಸಿಟಿ  ಯೋಜನೆಯೂ ಸಿಕ್ಕಿತ್ತು. ಇದಾದ ಮೇಲಾದರೂ ನಗರದ ರಸ್ತೆಗಳ ಪರಸ್ಥತಿ ಸುಧಾರಿಸುತ್ತೆ ಎಂದುಕೊಂಡಿದ್ದ ಜನರ ನೀರಿಕ್ಷೆ ಮತ್ತಷ್ಟು ಅದ್ವಾನಕ್ಕಿಳಿಸಿದೆ. ಯಾಕೆಂದರೆ ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಬಿಟ್ಟಿದ್ದಾರೆ. ಪಾಲಿಕೆ ಹಾಗೂ ಸ್ಮಾರ್ಟ್​ ಸಿಟಿ ಕಂಪನಿ ಸಮನ್ವಯದ ಕೊರತೆಯಿಂದ ಸದ್ಯ  ನಗರದ ಪ್ರಮುಖ ರಸ್ತೆಗಳ ಹೇಳತೀರದಾಗಿದೆ. ನಗರಾಭೀವೃಧಿ ಸಚಿವರಾಗಿರೋ ಭೈರತಿ ಬಸವರಾಜ ಇನ್ನೆರಡು ತಿಂಗಳಲ್ಲಿ ಹಲವಾರು ಕಾಮಗಾರಿಗಳನ್ನು ಮುಗಿಸಿ ಲೋಕಾರ್ಪಣೆ ಮಾಡ್ತಿವಿ ಎಂದಿದ್ದರು. ಆದರೆ ಸಧ್ಯ ಮೂರು ತಿಂಗಳು ಕಳೆದರೂ ಇನ್ನು ಯಾವುದೇ ಕೆಲಸ ಆಗಿಲ್ಲ. ಹೊಸದಾಗಿ ಜಿಲ್ಲೆಯ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ನೂತನ ಸಚಿವರಾಗಿದ್ದಾರೆ, ಕೆಲವೊಂದು ಕಡೆಗಳಲ್ಲಿ ಸರ್ಕಾರದ ಗುತ್ತಿಗೆದಾರರಿಗೆ ಹಣ ಬಂದಿಲ್ಲ, ಹೀಗಾಗೇ ಅದನ್ನು ಸರಿಪಡಿಸಿ ಸ್ಮಾರ್ಟ್​ ಸಿಟಿ ಕಾಮಗಾರಿಗಳಿಗೆ ವೇಗ ನೀಡುತ್ತೇವೆ ಅಂತಾರೆ.

ಇನ್ನೂ ಅಸಲಿಗೆ ಹುಬ್ಬಳ್ಳಿಯ ಹೃದಯ ಭಾಗ ಹಾಗೂ ಮಾರುಕಟ್ಟೆ ಪ್ರದೇಶಗಳಾದ ಕೊಪ್ಪಿಕರ್ ರಸ್ತೆ, ಸ್ಟೇಷನ್ ರಸ್ತೆ, ಗಣೇಶ ಪೇಟೆ, ಷಾ ಬಜಾರ್, ರಸ್ತೆಗಳ ಪರಸ್ಥಿಯೇ ಸದ್ಯ ನಿಜಕ್ಕೂ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ. ಅಲ್ಲದೆ ನಗರದ ಚೆನ್ನಮ್ಮ ವೃತ್ತದ ಬಳಿ ನಿರ್ಮಾಣಗೊಳುತ್ತಿರುವ ಬಹು ಅಂತಸ್ಥಿನ ಕಾರ್ ಪಾರ್ಕಿಂಗ್ ಕಟ್ಟಡದಿಂದ  ಸದ್ಯ ಕೋರ್ಟ್​ ಸರ್ಕಲ್ ರಸ್ತೆಯೇ ಬಂದ್ ಮಾಡಿದ್ದಾರೆ. ಮಲ್ಟಿ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡುತ್ತೇವೆ ಅಂತ ಹುಬ್ಬಳ್ಳಿ-ಗದಗ ರಸ್ತೆಯನ್ನೆ ಬಂದ್ ಮಾಡಿದ್ದಾರೆ. ಹೀಗಾಗೇ ಆ ಮಾರ್ಗದ ವಾಹನಗಳನ್ನ ಚೆನ್ನಮ್ಮ ವೃತ್ತದಲ್ಲಿ ಡೈವರ್ಟ್​ ಮಾಡಿದ್ದರಿಂದ ಸಧ್ಯ ಟ್ರಾಫಿಕ್ ಕಿರಿ ಕಿರಿ ಅನುಭವಿಸುವಂತಾಗಿದೆ.

ನೂತನವಾಗಿ ಸಚಿವರಾಗಿರುವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಬೆಟ್ಟದಷ್ಟು ಸವಾಲು ಎದುರಾಗಿವೆ.. ಅದರಲ್ಲಿ ಮೊದಲನೆಯದ್ದೆ ಈ ಸ್ಮಾರ್ಟ್​ ಸಿಟಿ ಕಾಮಗಾರಿಗಳು ಕಿರಿಕರಿ. ಜಿಲ್ಲೆಯಲ್ಲಿ ಓರ್ವ ಮಾಜಿ ಸಿಎಂ, ಓರ್ವ ಕೇಂದ್ರ ಸಚಿವರು ಹಾಗೂ ನೂತನ ರಾಜ್ಯ ಸರ್ಕಾರದ ಸಚಿವರಿದ್ದರೂ ರಸ್ತೆಗಳನ್ನು ಸುಧಾರಣೆ ಮಾಡೋಕೆ ಆಗ್ತಿಲ್ಲ ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ ಅದು ಯಾವಾಗ ಸಚಿವರು ಮನಸ್ಸು ಮಾಡ್ತಾರೋ ಅದ್ಯಾವ ನಗರದ ರಸ್ತೆಗಳು ಸ್ಮಾರ್ಟ್​ ಆಗ್ತಾವೋ ಎಂದು ಜನ ಬಿಟ್ಟ ಆಸೆ ಕಣ್ಣಿನಿಂದ ನೋಡುತ್ತಿದ್ದಾರೆ..

ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss