ರಾಯಚೂರು : ತಲೆ ಮೇಲೆ ಕೃಷಿ ಸಾಮಗ್ರಿಗಳನ್ನ ಹೊತ್ತು ಹರಿಯುವ ನದಿಯಲ್ಲೇ ಸಾಗುತ್ತಿರುವ ಮಹಿಳೆಯರು, ರೈತರು.. ಅನ್ಯ ಮಾರ್ಗವಿಲ್ಲದೇ ಇವರ ಜೊತೆ ಬೈಕ್ ನಲ್ಲಿ ಎದ್ನೋ ಬಿದ್ನೋ ಅಂತ ಸಾಗ್ತಿರೋ ಜನ.. ಈ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮುಷ್ಟೂರು ಎಂಬ ಗ್ರಾಮದಲ್ಲಿ. ಕಳೆದ ಎರಡು ದಶಕಗಳಿಂದ ಈ ಗ್ರಾಮದ ಜನರ ಗೋಳನ್ನ ಕೇಳೋರೇ ಇಲ್ಲ.. ಸರಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಇಂದಿಗೂ ಸುಸಜ್ಜಿತ ರಸ್ತೆ ಇಲ್ಲ.
ಅಷ್ಟೇ ಅಲ್ಲ ರೋಗಿಗಳು, ಅಂಗವಿಕಲರು, ಶಾಲಾ ಕಾಲೇಜು ಮಕ್ಕಳು ಸಹ ನಿತ್ಯ ಹೀಗೆಯೇ ಓಡಾಡ್ತಾರೆ. ಯಾಕೆಂದರೆ ಈ ಗ್ರಾಮದಿಂದ ಮಾನ್ವಿ ಪಟ್ಟಣಕ್ಕೆ ತೆರಳೋದಕ್ಕೆ ಅನ್ಯ ಮಾರ್ಗವಿಲ್ಲ.. ಹಾಗಾಗಿ ನದಿ ತುಂಬಿ ಹರಿದರೂ ಇದೇ ಹಳ್ಳದಲ್ಲಿ ಜೀವ ಭಯದಲ್ಲೇ ಓಡಾಡುವ ಅನಿವಾರ್ಯತೆ ಇಲ್ಲಿನವರದ್ದಾಗಿದೆ.
ಇನ್ನು ದುರಂತ ಅಂದ್ರೆ ಹೀಗೆ ಹರಿಯುವ ಹಳ್ಳದಲ್ಲೇ ಬೈಕ್ ಸವಾರಿ ಮಾಡುತ್ತಾ ಇಲ್ಲಿನ ಎದ್ದೋ, ಬಿದ್ದು ಬರ್ತಾರೆ. 2008-09 ರಲ್ಲಿ 63 ಲಕ್ಷ ಅನುದಾನದಲ್ಲಿ ಅರ್ಧಂಬರ್ಧ ಸೇತುವೆ ನಿರ್ಮಾಣ ಮಾಡಲಾಗಿದೆ. ಆದ್ರೆ ಅನುದಾನ ಕೊರತೆ ಎಂದು ಅರೆ ಬರೆ ಕಾಮಗಾರಿ ಮಾಡಿ ಗುತ್ತಿಗೆದಾರರು ಕೈ ತೊಳೆದುಕೊಂಡಿದ್ದಾರೆ. ಹಾಗೇ ಆ ಗುತ್ತಿಗೆದಾರರು ಮಾಡಿದ ಆ ಸೇತುವೆಯೂ 2009 ರಲ್ಲಿ ಬಂದ ಪ್ರವಾಹಕ್ಕೆ ನಾಶವಾಗಿದೆ.. ಅಂದಿನಿಂದ ಇಂದಿನವರೆಗೂ ಸೇತುವೆ ಕಾಣದೇ ಗ್ರಾಮಸ್ಥರು ಶಾಲಾ ಕಾಲೇಜು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ ಅನಿವಾರ್ಯತೆ ಯಿಂದ ಇದೇ ಮಾರ್ಗದಲ್ಲಿ ತೆರಳ್ತಾರೆ.

ಇನ್ನು ಪ್ರತೀ ವರ್ಷ ಈ ಹಳ್ಳಕ್ಕೆ ಅಡ್ಡಲಾಗಿ ತಾತ್ಕಾಲಿಕ ಮರ ಹಾಕಿ ಅಧಿಕಾರಿಗಳು ಕೈ ತೊಳೆದುಕೊಳ್ತಿದ್ದಾರೆ. ನದಿ ನೀರಿನ ಪ್ರಮಾಣ ಹೆಚ್ಚಾದಾಗ ಸಾವು ಕೂಡ ಸಂಭವಿಸೋ ಸಾಧ್ಯತೆ ಇದೆ.. ಇಷ್ಟೆಲ್ಲಾ ಸಮಸ್ಯೆ ಇದ್ರೂ ಇಲ್ಲಿನ ಸ್ಥಳೀಯ ಶಾಸಕ ರಾಜಾ ವೆಂಕಟಪ್ಪ ನಾಯಕ, ಹಾಗೂ ಅಧಿಕಾರಿಗಳು ಕೇರ್ ಮಾಡ್ತಿಲ್ಲ. ಹಾಗಾಗಿ ಗ್ರಾಮದ ಜನ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆಹಿಡಿ ಶಾಪ ಹಾಕ್ತಿದ್ದಾರೆ. ಇನ್ನಾದ್ರೂ ಎಚ್ಚೆತ್ತು ಈ ಜನರಿಗೆ ದಾರಿ ಮಾಡಿಕೊಡುವುದರ ಮೂಲಕ ಇವರೆಲ್ಲ ದಾರಿದೀಪವಾಗಬೇಕಿದೆ.
ರ್ಕಾರ ಸತ್ತಿದೆ.. ರಾಜ್ಯಾದ್ಯಂತ ದಾನಿಗಳು ಬದುಕಿದ್ದಾರೆ. ಯಾರಾದ್ರೂ ಸಂಘ ಸಂಸ್ಥೆಗಳು ಈ ಗ್ರಾಮಸ್ಥರಿಗೆ ಸಾಧ್ಯವಾದ್ರೆ ಅನುಕೂಲ ಮಾಡಿಕೊಡಿ. ಕರ್ನಾಟಕ ಟಿವಿ ಪ್ರತಿನಿಧಿ ಅನಿಲ್ ನಂಬರ್ : 8792212423
ಅನಿಲ್ ಕುಮಾರ್ ಕರ್ನಾಟಕ ಟಿವಿ. ರಾಯಚೂರು