- Advertisement -
ಹುಬ್ಬಳ್ಳಿ: ಸುಪಾರಿ ಪಡೆದು ಹತ್ಯೆ ಮಾಡಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯಿರುವ ಹೋಟೆಲ್ನಲ್ಲಿ ಈ ಒಂದು ಕೃತ್ಯ ಎಸಗಲಾಗಿದೆ. 70 ಬಾರಿ ಇರಿದು ಕೊಲೆ ಮಾಡಲಾಗಿದ್ದು,ಒಬ್ಬನಿಂದ 39 ಬಾರಿ ಇರಿತಕೊಳಗಾಗಿದ್ದು ಮತ್ತೊಬ್ಬನಿಂದ 31 ಬಾರಿ ಇರಿಯಲಾಗಿದೆ ಎಂಬುವ ಮಾಹಿತಿ ಲಭ್ಯವಾಗಿದೆ.
ಕೊಲೆಗೆ ಕಾರಣವೇನು?
ಕೊಲೆಗಾರಿಬ್ಬರು ಬಾಗಲಕೋಟೆ ಮೂಲದವರಾಗಿದ್ದು, ಈ ಹಿಂದೆ ಚಂದ್ರಶೇಖರ್ ಗುರೂಜಿಯವರ ಹತ್ತಿರ ಹಂತಕರು ವ್ಯಾಪಾರ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರಂತೆ. ಆದರೆ ಅವರ ಸಲಹೆಗಳು ಯಾವುದು ಕೂಡಾ ಕೆಲಸಕ್ಕೆ ಬಾರದೇ ಲಕ್ಷ ಲಕ್ಷ ಹಣ ಕಳೆದುಕೊಂಡ ಕಾರಣ ಇಬ್ಬರು ಹಂತಕರು ಕಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ವ್ಯಕ್ತವಾಗಿದೆ.
ಅಷ್ಟಕ್ಕೂ ಗುರೂಜಿಯವರಿಗೆ ಶತ್ರುಗಳೇ ಇರಲಿಲ್ಲ. ಹೀಗಾಗಿ ಪರಿಚಿತರೆ ಈ ಒಂದು ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
- Advertisement -