Mandya News:
ಮಂಡ್ಯ: ಪ್ರಖ್ಯಾತ ಚಿನ್ನದ ಅಂಗಡಿ ಮಾಲೀಕ ಜಗನ್ನಾಥ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇದೀಗ ಕಟು ಹೋರಾಟಗಾರ್ಥಿ ಸಲ್ಮಾ ಬಾನು ಪೊಲೀಸರ ಅತಿಥಿಯಾಗಿದ್ದಾಳೆ.
ಅದೊಂದು ಸಮಯದಲ್ಲಿ ಸಮಾಜ ಸುಧಾರಣೆ ಮಾಡ್ತೀನಿ ಅನ್ಯಾಯದ ವಿರುದ್ಧ ಹೋರಾಡುತ್ತೀನಿ ಎಂದು ಉದ್ದುದ್ದ ಭಾಷಣ ಬೀಗುತ್ತಿದ್ದ ಸಲ್ಮಾ ಬಾನು ಬಣ್ಣ ಬಯಲಾಗಿದೆ. ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ಎಂಬಂತೆ ಮುಖಕ್ಕೆ ಬಣ್ಣ ಬಲಿದು ರೀಲ್ಸ್ ಮಾಡುತ್ತಿದ್ದ ಯುವತಿಯ ನಿಜ ಬಣ್ಣ ಬಯಲಾಗಿದ್ದು ಕಂಡು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.
ಚಿನ್ನದ ಅಂಗಡಿಯ ಮಾಲೀಕ ಜಗನ್ನಾಥ್ ಶೆಟ್ಟಿಗೆ ಮಂಡ್ಯದ ಸಲ್ಮಾ ಬಾನು ಹನಿಟ್ರಾಪ್ ಮಾಡಿ 50 ಲಕ್ಷ ಹಣ ಪೀಕಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಆಕೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.




