Bigboss News:
ಬಿಗ್ ಬಾಸ್ ಮನೆಯಂಗಳದಿಂದ ದಿನಕ್ಕೊಂದು ಇಂಟ್ರಸ್ಟಿಂಗ್ ಸ್ಟೋರಿ ಹೊರಬರುತ್ತಿದೆ. ಜಶ್ವಂತ್ ಮೇಲೆ ನಂದಿನಿ ಸಿಟ್ಟಾಗಿದ್ದು ಈ ಬಾರಿ ಕಂಡು ಬಂದಿದೆ.
ಬಿಗ್ ಬಾಸ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. 11 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಈಗಾಗಲೇ 5 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇದ್ದ ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಈಗ ಕ್ಯಾಪ್ಟನ್ಸಿ ಟಾಸ್ಕ್ಗೆ ಎರಡು ಟೀಂ ಮಾಡಲಾಗಿದೆ. ಎಲ್ಲರೂ ಕ್ಯಾಪ್ಟನ್ಸಿ ಟಾಸ್ಕ್ಗೆ ಟಫ್ ಕಾಂಪಿಟೇಷನ್ ನೀಡುತ್ತಿದ್ದಾರೆ. ಈ ಮಧ್ಯೆ ನಂದು ಅವರು ಜಶ್ವಂತ್ ವಿರುದ್ಧ ಉರಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡೋಕೆ ಜಶ್ವಂತ್ಗೆ ಸೂಚಿಸಲಾಯಿತು. ಜಶ್ವಂತ್ ಎಲ್ಲರಿಗೂ ಅಡುಗೆ ಮಾಡಿ ಕೊಟ್ಟಿದ್ದಾರೆ. ಅಡುಗೆ ಮಾಡಿದ ನಂತರ ಎಲ್ಲರೂ ಟೇಬಲ್ಗೆ ಬಂದು ಊಟ ಮಾಡೋಕೆ ಶುರು ಮಾಡಿದರು. ನಂದಿನಿ ಹಾಗೂ ಸಾನ್ಯಾ ಇಬ್ಬರ ಪಕ್ಕದಲ್ಲೂ ಕುರ್ಚಿ ಖಾಲಿ ಇತ್ತು. ಆಗ ಜಶ್ವಂತ್ ಬಂದು ಸಾನ್ಯಾ ಪಕ್ಕ ಕೂತರು. ಇದು ನಂದಿನಿಗೆ ಬೇಸರ ಮೂಡಿಸಿದೆ.
ಸಾನ್ಯಾ ಅಯ್ಯರ್ ಹಾಗೂ ಜಶ್ವಂತ್ ಕ್ಲೋಸ್ ಆಗಿದ್ದಾರೆ ಎಂಬ ವಿಚಾರಕ್ಕೆ ನಂದಿನಿ ಅವರು ಸಿಟ್ಟು ಮಾಡಿಕೊಂಡಿದ್ದಾರೆ.
ಸಾನ್ಯಾ ಅಯ್ಯರ್ ಸುದೀಪ್ ಹೇಳಿದ ಮಾತನ್ನು ಉಳಿಸಿಕೊಂಡಿಲ್ಲ..! ಚರ್ಚೆಗೆ ಕಾರಣವಾಗುತ್ತಾ ಈ ವಿಚಾರ…?!