Banglore news:
ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರು ನಿನ್ನೆ ನಿಧನ ಹೊಂದಿದ ಬಳಿಕ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ. ಜೊತೆಗೆ ರಾಣಿ ಎರಡನೇ ಎಲಿಜಬೆತ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದು, ನನ್ನ ಅಜ್ಜ ಮಹಾರಾಜ ಜಯಚಾಮರಾಜೇಂದ್ರ ಒಡೆರ್ರೊಂದಿಗೆ ಸುತ್ತಾಡಿದ್ದು ನಮಗೆ ನೆನಪಿದೆ ಎಂದು ಸಾಮಾಜಿಕ ಜಾಲಣಗಳಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.
ಇಂಗ್ಲೆಂಡಿನ, ನ ರಾಣಿ ಎರಡನೇ ಎಲಿಜಬೆತ್ ೧೯೫೦ ರ ದಶಕದ ಉತ್ತರರ್ಧದಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ, ಅಂದಿನ ರಾಜ್ಯಪಾಲರು ಮತ್ತು ಮೈಸೂರು ರಾಜ್ಯದ ಮಾಜಿ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಬೇಟಿ ಮಾಡಿದ್ದರು ಎನ್ನಲಾಗುತ್ತಿದೆ.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರು ಸೆಪ್ಟೆಂಬರ್ ೮ ರಂದು ನಿಧನ ಹೊಂದಿದ್ದಾರೆ. ಇಂಗ್ಲೆಂಡಿನ ರಾಣಿ ಎಲಿಜಬೆತ್-II, ೧೯೫೦ ರ ದಶಕದ ಉತ್ತರರ್ಧದಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ, ಅಂದಿನ ರಾಜ್ಯಪಾಲರು ಮತ್ತು ಮೈಸೂರು ರಾಜ್ಯದ ಮಾಜಿ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಬೇಟಿ ಮಾಡಿದ್ದರು ಎಂದು ತಿಳಿಯುತ್ತದೆ.
ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಂಚಿಕೊಂಡ ವೀಡಿಯೋದಲ್ಲಿನ ದೃಶ್ಯಗಳು ರಾಣಿ ಎಲಿಜಬತ್ ಹಾಗು ಮೈಸೂರು ರಾಜ ಮನೆತನದ ಶ್ರೀಮಂತ ಇತಿಹಾಸವನ್ನು ಮತ್ತೆ ನೆನಪಿಸುತ್ತಿದೆ