- Advertisement -
Davangere News:
ಮಹಾಮಳೆಗೆ ದಾವಣಗೆರೆ ಜನರು ತತ್ತರಿಸಿ ಹೋಗಿದ್ದಾರೆ. ಫಸಲಿಗೆ ಬಂದಂತಹ ಬೆಲೆಯನ್ನು ತೆಗೆದಿಹಡಲು ಅಡಿಗೆ ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಬಳಿಯ ಕೆರೆಯಾಗಲಹಳ್ಳಿ ಬಳಿ ಕೆರೆ ಕೋಡಿ ಬಿದ್ದ ಪರಿಣಾಮ ಅಡಿಕೆ ತೋಟ ಜಲಾವೃತವಾಗಿದೆ.ಈ ಕಾರಣದಿಂದ ಅಡಿಕೆ ಬೆಳೆಗಾರರು ಪರದಾಡುವಂತಾಗಿದೆ. ಅಲ್ಲದೆ, ಸದ್ಯ ಅಡಿಕೆ ಬೆಲೆ ಹೆಚ್ಚಳವಾಗಿ 60 ಸಾವಿರ ರೂ. ಕ್ವಿಂಟಾಲ್ ತಲುಪಿದೆ. ಹೀಗಾಗಿ ತೋಟದಲ್ಲಿ ನಡುಮಟ್ಟದವರೆಗೆ ನೀರಿದ್ದರೂ ಅಪಾಯ ಲೆಕ್ಕಿಸದೇ ಅಡಿಕೆ ಕೊಯ್ಲು ಕೆಲಸ ಮಾಡುತ್ತಿದ್ದಾರೆ. ತೆಪ್ಪ ಹಾಗೂ ಉದ್ದನೆಯ ಕೋಲು ಬಳಸಿ ಅಡಿಕೆ ಕೊಯ್ಯುತ್ತಿದ್ದಾರೆ ರೈತರು. ಅಡಿಕೆ ಹಾಗೆ ಬಿಟ್ಟರೆ ಕೊಳೆ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುವುದರಿಂದ ರೈತರು ಅಪಾಯ ಮ,ರೆತು ಅಡಿಕೆ ಕೊಯ್ಯುತ್ತಿದ್ದಾರೆ.
- Advertisement -