Tuesday, April 15, 2025

Latest Posts

ಮಂಡ್ಯದಲ್ಲಿ ಟಿಪ್ಪು ಜಯಂತಿ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು

- Advertisement -

ಮಂಡ್ಯ: ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಮಂಡ್ಯ ಜಿಲ್ಲಾ ಕಾಂಗ್ರೆಸ್ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಯಿತು. ಟಿಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ, ನಂತರ ಸಿಹಿ ಹಂಚಿ ಟಿಪ್ಪುವಿಗೆ  ಜೈಕಾರ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಂಸದ ಪ್ರತಾಪ್ ಸಿಂಹ

ಮೈಸೂರಿನ ಹುಲಿ ಎಂದು ಜೈ ಕಾರ ಹಾಕಿದರು. ಜಗತ್ತಿನ ಇತಿಹಾಸದಲ್ಲಿ  ಮಕ್ಕಳನ್ನೇ ಒತ್ತೆ ಇಟ್ಟಂತ ದೊರೆ ಟಿಪ್ಪು, ಅವರು ಜಾತ್ಯಾತೀತ ಮನೋಭಾವನೆಯನ್ನು ಹೊಂದಿದ್ದರು, ನಮ್ಮ ನಾಡನ್ನು ಕಟ್ಟಲು ಮುಂದಾಗೋಣ ಎಂದು ಟಿಪ್ಪು ನೆನೆದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್ ಹೇಳಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಜಬಿವುಲ್ಲ, ಮುಜಾಯಿದ್, ಚಿನಕುರುಳಿ  ರಮೇಶ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಡ್ಯ ಜನರಿಗೆ ಮುಳ್ಳಂದಿ ಕಾಟ

- Advertisement -

Latest Posts

Don't Miss