ಕೊಪ್ಪಳ: ಪ್ರತಿದಿನ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದು, ಪ್ರತಿನಿತ್ಯ ಪೊಲೀಸರು ವಾಹನಗಳನ್ನು ಜಪ್ತಿ ಮಾಡುತ್ತಲೇ ಇರುತ್ತಾರೆ. ಏನೇ ಮಾಡಿದರು ಅಕ್ರಮ ಮರಳುಗಾರಿಕೆ ನಿಲ್ಲುತ್ತಿಲ್ಲವೆಂದು ಸಾರ್ವಜನಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಜ್ ಮಾಡಿರುವ ವಾಹನವನ್ನು ಬಿಡಿಸಿಕೊಂಡು ಬಂದು ಮತ್ತೆ ಅದೇ ದಂಧೆಗೆ ನಿಲ್ಲುತ್ತಿದ್ದಾರೆ, ಹಾಗಾಗಿ ಏನೇ ಕ್ರಮಕೈಗೊಂಡರು ಪ್ರಯೋಜನವಾಗುತ್ತಿಲ್ಲ ಎಂದು ಜಿಲ್ಲೆಯ ಎಸ್ಪಿ ಹೊಸ ಮಾರ್ಗ ಕಂಡು ಹಿಡಿದಿದ್ದಾರೆ.
ಎಸ್ ಪಿ ಅರುಣಾಂಗ್ಷು ಗಿರಿ ಕಂದಾಯ ಇಲಾಖೆ ಹಾಗೂ ಗಣಿ ಭೂವಿಜ್ಞಾನ ಇಲಾಖೆಗೆ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದಿರುವ ಎಷ್ಟು ಮರುಳುಗಾರಿಕೆ ಸ್ಥಳಗಳಿವೆ ಎಂದು ಸರ್ವೆ ಮೂಲಕ ತಿಳಿದು, ಅನುಮತಿ ಪಡೆಯದೆ ಮರುಳುಗಾರಿಕೆ ನಡೆಸುವ ಸ್ಥಳಗಳನ್ನು ಸರ್ವೆ ಮಾಡಲು ಸೂಚಿಸಿದ್ದಾರೆ. ಇದರಿಂದ ಅಕ್ರಮ ಪಾಯಿಂಟ್ ಗಳು ಪತ್ತೆಯಾದರೆ ದಾಖಲೆಯೊಂದಿಗೆ ಭೂಮಿ ಸೀಜ್ ಮಾಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬಹುದೆಂದು ಎಸ್ ಪಿ ಹೇಳಿದ್ದಾರೆ.