- Advertisement -
ಮಂಡ್ಯ: ರಸ್ತೆ ಗುಂಡಿಗೆ ಬಿದ್ದು ನಿವೃತ್ತ ಯೋಧರೊಬ್ಬರು ಬಲಿಯಾಗಿದ್ದಾರೆ. ಮಂಡ್ಯದ ಕಾರಿಮನೆ ಗೇಟ್ ಬಳಿ ಘಟನೆ ನಡೆದಿದೆ. ಕುಮಾರ್(38) ಮೃತ ನಿವೃತ್ತ ಯೋಧ. ಇತ್ತೀಚೆಗಷ್ಟೇ ಸೇನೆಯಿಂದ ನಿವೃತ್ತಿ ಪಡೆದಿದ್ದ ಕುಮಾರ್ ಅವರು ಬೆಂಗಳೂರಿನಲ್ಲೇ ಪೊಲೀಸ್ ಪೇದೆ ಹುದ್ದೆಯ ನೇಮಕಕ್ಕೆ ತರಬೇತಿ ಪಡೆಯುತ್ತಿದ್ದರು. ತಂದೆ ಜೊತೆ ಸಾತನೂರು ಗ್ರಾಮಕ್ಕೆ ತೆರಳುವಾಗ ಮಂಡ್ಯದ ಕಾರಿಮನೆ ಗೇಟ್ ಬಳಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟ ಮಗನ ಕಂಡು ತಂದೆ ಗೋಳಾಡುತ್ತಿದ್ದರು. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement -