ಕಾರ್ಯಕ್ರಮದ ವೇದಿಕೆಯಲ್ಲೇ ಅಸ್ವಸ್ಥರಾದ ಕೇಂದ್ರ ಸಚಿವ ನಿತನ್ ಗಡ್ಕರಿ

ಕೊಲ್ಕತ್ತಾ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಾರ್ಯಕ್ರಮವೊಂದರಲ್ಲಿ ಅಸ್ವಸ್ಥರಾಗಿದ್ದರು. ಸಿಲಿಗುರಿಯಲ್ಲಿ ನಡೆದ 1206 ಕೋಟಿಯ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆಗೆ ಗಡ್ಕರಿ ಅವರು ಆಗಮಿಸಿದ್ದರು. ನಂತರ ನಿತಿನ್ ಅವರು ಕಾರ್ಯಕ್ರಮದ ಮಧ್ಯೆ ಅಸ್ವಸ್ಥರಾಗಿದ್ದರಿಂದ ವೈದ್ಯರು ತಕ್ಷಣವೇ ಗ್ರೀನ್ ರೂಮ್ ನಲ್ಲಿ ಪ್ರಥಮ ಚಿಕಿತ್ಸೆ ನೀಡಿದರು. ಚಿಕಿತ್ಸೆ ನಂತರ ಚೇತರಿಸಿಕೊಂಡು ತಮ್ಮ ಕಾರಿನಲ್ಲಿ ಹೊರಟರು ಎಂದು ಬಿಜೆಪಿ ಶಾಸಕ ನೀರಜ್ ಜಿಂಬಾ ಹೇಳಿದ್ದಾರೆ. ಗಡ್ಕರಿ ಅವರನ್ನು ಡಾರ್ಜಲಿಂಗ್ ಸಂಸದ ರಾಜು ಬಿಸ್ತಾ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ಹೇಳಿದರು.

ಇಂದು ‘ತ್ರಿಬಲ್ ರೈಡಿಂಗ್’ ಟ್ರೇಲರ್ ಬಿಡುಗಡೆ

ವೃದ್ಧೆಯ ಕತ್ತಲ್ಲಿರುವ ಚಿನ್ನದ ಸರ ಕಿತ್ತು ಸರಗಳ್ಳರು ಪರಾರಿ

About The Author