ಹಾಸನ: ರಾಜ್ಯದಲ್ಲಿ ಉಗ್ರರ ಕೆಲವು ಸ್ಲೀಪರ್ ಸೆಲ್ ಗಳು ಇದ್ದಾಗ ನಾನು ಗೃಹ ಸಚಿವನಾಗಿದ್ದೆ. 18 ಸ್ಲೀಪರ್ ಸೆಲ್ ಜನರನ್ನು ತಿಹಾರ್ ಜೈಲಿಗೆ ಕಳುಹಿಸಿದ್ದೆವು. ಪಕ್ಕದ ರಾಜ್ಯ ಹಾಗೂ ಅಂತರಾಷ್ಟ್ರೀಯ ಗಡಿಯಲ್ಲಿ ಹಲವರು ತರಬೇತಿ ಪಡೆದು ಬರುತ್ತಾರೆ, ನರೇಂದ್ರ ಮೋದಿಯವರು ಬಂದ ಬಳಿಕ ಇದಕ್ಕೆ ಅವಕಾಶ ನೀಡಿಲ್ಲ. ಹಿಂದೆ ಬೆಂಗಳೂರು, ಹೈದ್ರಾಬಾದ್ ಗಳಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು ಅದೆಲ್ಲ ನಿಲ್ಲಿಸಲಾಗಿದೆ. ಆದರೂ ಕೆಲವು ಈ ತರ ನಡೆಯುತ್ತಿದೆ ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಅವರು ಆಕ್ಟೀವ್ ಆಗಿರುವುದನ್ನು ಗಮನಿಸಿದ್ದೆವು ಎಂದು ಸಿಎಂ ಬೇಲೂರು ತಾಲ್ಲೂಕಿನ ಹಳೆಬೀಡಿನಲ್ಲಿ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು
ಸುಮಾರು ಕಡೆ ಇದ್ದ ಸ್ಲೀಪರ್ ಸೆಲ್ ಗಳಲ್ಲಿದ್ದವರನ್ನು ಜೈಲಿಗೆ ಕಳುಹಿಸಿದ್ದೇವೆ. ನಾನು ಹಿಂದೆ ಗೃಹ ಸಚಿವನಾಗಿದ್ದಾಗ ದಕ್ಷಿಣ ರಾಜ್ಯಗಳ ಡಿಜಿಗಳ ಸಭೆ ಮಾಡಿದ್ದೆ, ಬಹಳಷ್ಟು ಜನರು ಕೃತ್ಯ ಮಾಡಿ ಬಾರ್ಡರ್ ಕ್ರಾಸ್ ಮಾಡಿ ಅಲ್ಲಿ ಹೋಗುತ್ತಾರೆ, ಅಲ್ಲಿಂದ ಇಲ್ಲಿಗೆ ಬರುತ್ತಾರೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಒಗ್ಗಟ್ಟಾಗಿ ಗುಪ್ತಚರ ಮಾಹಿತಿ, ಉಗ್ರ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡರೆ ಇದರ ನಿಯಂತ್ರಣ ಸಾದ್ಯವಾಗುತ್ತದೆ ಮತ್ತುಈದರ ಬಗ್ಗೆ ನಾನು ಮುಂದೆ ಎಲ್ಲಾ ಸಿಎಂ ಗಳಿಗೆ ಪತ್ರ ಬರೆಯುತ್ತೇನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಲೇಬೇಡಿ.. ಇಲ್ಲದಿದ್ದಲ್ಲಿ ಅನಾರೋಗ್ಯ ಬರುವುದು ಖಂಡಿತ..