ಬಿಜೆಪಿಗೆ ಕೋವಿಡ್ ಎಂದರೆ ಭಾರತ್ ಜೋಡೋ ಯಾತ್ರೆ : ರಾಹುಲ್ ಗಾಂಧಿ

ಹರಿಯಾಣ: ಕೇಂದ್ರದ ಆಡಳಿತಾರೂಢ ಪಕ್ಷವು ಭಾರತದ ಇತರ ಭಾಗಗಳಲ್ಲಿ ಎಷ್ಟು ಬೇಕಾದರೂ ಸಾರ್ವಜನಿಕ ಸಭೆಗಳನ್ನು ನಡೆಸಬಹುದು, ಅಲ್ಲಿ ಕೋವಿಡ್ ಇರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಟೀಕಿಸಿದ್ದಾರೆ. ‘ಭಾರತ್ ಜೋಡೋ ಯಾತ್ರೆ’ ಎಲ್ಲಿಂದ ಹಾದು ಹೋಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆಯನ್ನು ನಿಲ್ಲಿಸಲು “ನೆಪ”ಗಳನ್ನು ಹುಡುಕುತ್ತಿದೆ ಎಂದು ಗಾಂಧಿ ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು. ಯಾತ್ರೆಯು ಪ್ರಸ್ತುತ ಹರಿಯಾಣದಲ್ಲಿದ್ದು, ಇಂದು ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸಲಿದೆ.

ಕೋವಿಡ್ ಭೀತಿಯಿಂದ ಜನರು ಚೀನಾ ತೊರೆಯುತ್ತಿದ್ದಾರೆ, ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ : ಶಾಂಘೈ ಆಸ್ಪತ್ರೆ ವ್ಯೆದ್ಯ ಡಾ. ಸಂಜೀವ್ ಚೌಬೆ

ಶುಕ್ರವಾರ ಸಂಜೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಕೇಂದ್ರ ಆರೋಗ್ಯ ಸಚಿವರು ಕೋವಿಡ್ ಮರಳಿದೆ, ಪ್ರಯಾಣ ನಿಲ್ಲಿಸಿ ಎಂದು ನನಗೆ ಪತ್ರ ಬರೆಯುತ್ತಿದ್ದಾರೆ. ಉಳಿದ ಭಾರತದಲ್ಲಿ, ಬಿಜೆಪಿ ಎಷ್ಟು ಸಾರ್ವಜನಿಕ ಸಭೆಗಳನ್ನು ಬೇಕಾದರೂ ಮಾಡಬಹುದು, ಆದರೆ ‘ಭಾರತ್ ಜೋಡೋ ಯಾತ್ರೆ’ ನಡೆಯುತ್ತಿರುವಲ್ಲಿ ಕರೋನಾ ಮತ್ತು ಕೋವಿಡ್ ಬರುತ್ತದೆ ಎಂದು ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ವಾರದ ಆರಂಭದಲ್ಲಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೋವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಯಾತ್ರೆಯನ್ನು ಮುಂದೂಡುವುದನ್ನು ಪರಿಗಣಿಸುವಂತೆ ಗಾಂಧಿ ಅವರಿಗೆ ಪತ್ರ ಬರೆದಿದ್ದರು.

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ

ಕೋವಿಡ್ ಭೀತಿಯಿಂದ ಜನರು ಚೀನಾ ತೊರೆಯುತ್ತಿದ್ದಾರೆ, ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ : ಶಾಂಘೈ ಆಸ್ಪತ್ರೆ ವ್ಯೆದ್ಯ ಡಾ. ಸಂಜೀವ್ ಚೌಬೆ

About The Author