Political News:
ರಾಜ್ಯದೆಲ್ಲೆಡೆ ರಾಜಕೀಯ ಹೈಡ್ರಾಮವೇ ನಡೆಯುತ್ತಿದೆ.ಇವೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೋಲಾರ ಜಿಲ್ಲೆಯ ಮತಕ್ಷೇತ್ರವೊಂದರಿಂದ 2023ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅವರು ಕೋಲಾರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಮಾಡಿದ ಭಾಷಣ ಚುನಾವಣಾ ಪ್ರಚಾರದಂತಿತ್ತು. ಎಲ್ಲ ಜನ ಕಷ್ಟಗಳಿಗೆ ಸ್ಪಂದಿಸುವುದಾಗಿ ಹೇಳಿದ ಅವರು ಚೆಡ್ಡಿ ಧರಿಸಿದ ವ್ಯಕ್ತಿಯೂ ಅಂದರೆ ಆರೆಸ್ಸೆಸ್ ನವರೂ ತಮ್ಮನ್ನು ನೇರವಾಗಿ ಭೇಟಿಯಾಗಬಹುದೆಂದು ಹೇಳಿದರು. ಇದು ನೇರವಾಗಿ ಆರ್ ಎಸ್ ಎಸ್ ನವರಿಗೆ ಟಾಂಗ್ ಕೊಟ್ಟಂತಿತ್ತು. ತಾವು ಸ್ಪರ್ಧಿಸಿದ ಕ್ಷೇತ್ರಗಳನ್ನೆಲ್ಲ ಅಭಿವೃದ್ಧಿ ಮಾಡಿರುವುದಾಗಿ ಹೇಳಿದ ಸಿದ್ದರಾಮಯ್ಯ ಕಳೆದೈದು ವರ್ಷಗಳಲ್ಲಿ ಬಾದಾಮಿ ಸಹ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.http://ಪೋಸ್ಟರ್ ವಾರ್ ಮೂಲಕ ರಾಜಕೀಯ ಹೈಡ್ರಾಮಾ..! ಮಧ್ಯ ಪ್ರವೇಶಿಸಿದ ಕೋರ್ಟ್ ..!
“ಸಿದ್ದು ನಿಜ ಕನಸು”ಗಳಿಗೆ ತೀವ್ರ ವಿರೋಧ..!? “ನಮ್ಮ ಕನಸನ್ನು ನನಸಾಗಿಸೋರು ಯಾರು”..?! ರಾಜಕೀಯ ಹೈಡ್ರಾಮಾಕ್ಕೆ ಜನಸಾಮಾನ್ಯರ ಪ್ರಶ್ನೆ..?!
ಕರ್ನಾಟಕ ವಿಧಾನ ಸಭೆ ಚುನಾವಣೆ ಸದ್ಯ ಸಮೀಪಿಸುತ್ತಿದ್ದಂತೆ ಇದೀಗ ರಾಜಕೀಯ ನಾಯಕರ ಹೈಡ್ರಾಮಾ ಶುರುವಾಗಿದೆ. ಸರಕಾರಕ್ಕೆ ಇದೀಗ ಸಿದ್ದರಾಮಯ್ಯರೇ ಟಾರ್ಗೆಟ್ ಎನ್ನುವಂತಿದೆ. ಈ ಕಾರಣದಿಂದಲೇ ಸರಕಾರ ಟಿಪ್ಪು ನಿಜ ಕನಸುಗಳು ಎನ್ನುವಂತಹ ಪುಸ್ತಕವನ್ನೇ ಇದೀಗ ಸಿದ್ದರಾಮಯ್ಯ ನಿಜ ಕನಸುಗಳು ಎಂಬಂತಹ ಪುಸ್ತಕವನ್ನಾಗಿ ಮಾಡಿ ಬಿಡುಗಡೆಗೆ ಸಜ್ಜಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.http://ಕರ್ನಾಟಕದ ಸಂಸ್ಕೃತಿಯನ್ನು ನಿರ್ಲಕ್ಷಿಸಿತಾ ಸರಕಾರ..?
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದೆ. ಇಂದು ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿದ್ದು, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ. ಖಡ್ಗ ಹಿಡಿದುಕೊಂಡು ಡ್ರೆಸ್ ಹಾಕಿದ್ದವರು ಯಾರು? ನನ್ನ ತೇಜೋವಧೆ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿಯವರಿಗೆ ಎಚ್ಚರಿಕೆ ನೀಡಿದ್ದಾರೆ.ಜೊತೆಗೆ ಇದೀಗ ಕಾಂಗ್ರೆಸ್ ಪ್ರತಿಭಟನೆಗೂ ಮುಂದಾಗಿದ್ದಾರೆ. http://ತಾಯಿ ಮೇಲೆ ಆಣೆ ಮಾಡಿ ಕೊಟ್ಟ ಮಾತು ತಪ್ಪಿದ್ದಾರೆ ಸಿಎಂ..!? ಸರಕಾರಕ್ಕೆ ಮತ್ತೆ ಎಚ್ಚರಿಕೆ ನೀಡಿದ ಸ್ವಾಮೀಜಿ..!
ಆದರೆ ಇವೆಲ್ಲದರ ನಡುವೆ ಜನಸಾಮಾನ್ಯರು ಇದೀಗ ನಮ್ಮ ಕನಸುಗಳನ್ನು ವ್ಯಕ್ತಪಡಿಸಿದರೂ ಸರಕಾರ ಸುಮ್ಮನಾಗಿದೆ. ನಮ್ಮ ಕನಸುಗಳನ್ನು ನನಸು ಮಾಡೋರು ಯಾರು ಬಡ ಬಗ್ಗಲಿಗರ ಕನಸಲ್ಲ ಕನಿಷ್ಟ ಅವರ ದೈನಂದಿನ ಜೀವನವಾದರೂ ಹಸಿವಿಲ್ಲದೆ ನಿರಾಳವಾಗಿಸುವಂತೆ ಮಾಡಿ ಎಂದು ಅಂಗಲಾಚುತ್ತಿದ್ದಾರೆ.
ಮುನಿಯಪ್ಪ ಮುನಿಸು ಶಮನ ಮಾಡುವಲ್ಲಿ ಸಿದ್ದು ಯಶಸ್ವಿ..! ಕೋಲಾರದ ಕಾರ್ಯಕ್ರಮಕ್ಕೆ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣ..!
ಸ್ಯಾಂಟ್ರೋ ರವಿಗೂ ಆರಗ ಜ್ಞಾನೇಂದ್ರಗೂ ಏನ್ ಸಂಬಂಧ ಗೊತ್ತಾ…?! ಈ ಬಗ್ಗೆ ಏನಂದ್ರು ಗೃಹ ಸಚಿವರು..?!