ಮಂಡ್ಯದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ…!

Political News:

ಯೋಗಿ ಆದಿತ್ಯನಾಥ್ ಬಗ್ಗೆ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರ.ಸಿ.ಎಂ.ಇಬ್ರಾಹಿಂನಿಂದ ನಾಥ ಪರಂಪರೆಗೆ ಅವಮಾನ ಆರೋಪ.ಇಬ್ರಾಹಿಂ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು. ಮಂಡ್ಯದ ಸಂಜಯ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಇಬ್ರಾಹಿಂ ಪ್ರತಿಕೃತಿಗೆ ಚಪ್ಪಲಿಯಿಂದ ಒದ್ದು ಆಕ್ರೋಶ ವ್ಯಕ್ತ ಪಡಿಸಿದರು.ಐವರು ಪುರುಷರಿಗೆ ಬುರ್ಖಾ ತೊಡಿಸಿ ವ್ಯಂಗ್ಯ ರೀತಿಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.ಇಬ್ರಾಹಿಂ ಅವರ ಪತ್ನಿಯರೆಂದು ಬೋರ್ಡ್ ಹಾಕಿ ಆಕ್ರೋಶ ವ್ಯಕ್ತ ಪಡಿಸಲಾಯಿತು. ಪ್ರತಿಭಟನಾಕಾರರು ಸಂಜಯ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.
ಬಿಜೆಪಿಗೆ ಆಹಾರವಾಯ್ತ ಸಿ.ಎಂ.ಇಬ್ರಾಹಿಂ ಹೇಳಿಕೆ..?!
ಯೋಗಿ ಆದಿತ್ಯನಾಥ್ ವಿರುದ್ಧ ಹೇಳಿಕೆಯಲ್ಲಿ ನಾಥ ಪರಂಪರೆಗೆ ಅವಮಾನ ಆರೋಪ.ಸನಾತನ ಹಿಂದೂ ಧರ್ಮ, ಒಕ್ಕಲಿಗ ಸಮುದಾಯಕ್ಕೆ ಇಬ್ರಾಹಿಂರಿಂದ ಅವಮಾನದ ಆರೋಪ.ಇಬ್ರಾಹಿಂ ವಿರುದ್ಧ ಪ್ರತಿಭಟಿಸುತ್ತ ದಳಪತಿಗಳನ್ನ ಟಾರ್ಗೆಟ್ ಮಾಡಿದ ಬಿಜೆಪಿ.ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಿಜೆಪಿ, ಹಿಂದೂಪರ ಸಂಘಟನೆ ಮುಖಂಡರು ಭಾಗಿಯಾಗಿದ್ರು. ನಾಥ ಪಂಥ, ಒಕ್ಕಲಿಗರಿಗೆ ಅವಮಾನಿಸಿದರೂ ದಳಪತಿಗಳಿಂದ ಮೌನದ ಆರೋಪ ಎಂದು ಆಕ್ರೋಶಗೊಂಡರು.

ಹಾಸನ: ನವೀನ್ ಹತ್ಯೆ ಹಿಂದೆ ಅಕ್ರಮ ಮರಳುಗಾರಿಕೆ ಧ್ವೇಷ..?!

ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಗೆ ನಾಯಕರ ವ್ಯಂಗ್ಯ..!

“ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಕ್ಷೇತ್ರ ಬದಲಾವಣೆ ಮಾಡುತಿದ್ದಾರೆ”: ಎಂ.ಟಿ.ಬಿ

About The Author