Hassan News: ಹಾಸನ: ಹೊಳೆನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್ ಕಿಕ್ಕೇರಮ್ಮ ದೇವಸ್ಥಾನ ಹತ್ತಿರವಿರುವ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ಕೆಟ್ಟ ಮೊಟ್ಟೆಗಳ ವಿತರಣೆ ಮಾಡಿದ್ದು, ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡ್ ಕಿಕ್ಕೇರಮ್ಮ ದೇವಸ್ಥಾನದ ಹತ್ತಿರವಿರುವ ಅಂಗನವಾಡಿ ಕೇಂದ್ರದಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ವಿತರಣೆಯಾಗಿರುವ ಮೊಟ್ಟೆಗಳು ಕೆಟ್ಟು ಹೋಗಿದ್ದು, ಕಳಪೆ ಗುಣಮಟ್ಟದ ಪದಾರ್ಥ ಪೂರೈಕೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರವು ಅಕ್ಕಿ, ಬೇಳೆ, ಸಾಂಬಾರ ಪುಡಿ ಮತ್ತು ಮೊದಲಾದ ಪೋಷಕಾಂಶದ ಅಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು, ಈ ಬಾರಿ ವಿತರಣೆ ಮಾಡಿರುವ ಮೊಟ್ಟೆಗಳ ಗುಣಮಟ್ಟ ಸಂಪೂರ್ಣ ಕಳಪೆಯಾಗಿದ್ದು, ಮೊಟ್ಟೆಗಳು ಕೆಟ್ಟು ಕೆಟ್ಟ ವಾಸನೆಯಿಂದ ಮನೆಯ ವಾತಾವರಣ ಕುಲಷಿತಗೊಂಡಿದೆ ಎಂದು ಬಡಾವಣೆಯ ನಿವಾಸಿಗಳು ದೋರಿದ್ದಾರೆ. ಸಿಡಿಪಿಒ ಭಾಗ್ಯಮ್ಮ ಅವರು ಮಾತನಾಡಿ, ಈ ವಿಷಯ ಸಂಬಂಧಿಸಿದಂತೆ ನಮಗೆ ದೂರುಗಳು ಬಂದಿಲ್ಲ, ನೀವು ತಿಳಿಸಿರುವ ಕಾರಣದಿಂದ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ ಜಿಲ್ಲೆಯ ಅಧಿಕಾರಿಗೆ ವರದಿ ಸಲ್ಲಿಸುತ್ತೇವೆ ಮತ್ತು ಆಹಾರ ಪದಾರ್ಥ ಜಿಲ್ಲಾ ಕೇಂದ್ರದಿಂದ ಟೆಂಡರ್ ಪಡೆದ ವ್ಯಕ್ತಿ ಸರಬರಾಜು ಮಾಡಿರುವ ಕಾರಣ ಜಿಲ್ಲೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ಗರ್ಭಿಣಿ, ಬಾಣಂತಿಯರ ಆಕ್ರೋಶ..?!
- Advertisement -
- Advertisement -