Karavali News: ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ನದಿಗಳು ಮೈದುಂಬಿ ಹರಿಯುತ್ತದೆ. ಪರಿಣಾಮ ಜಮೀನುಗಳು ಜಲಾವೃತಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯ ನದಿಗಳು ಜೀವಕಳೆ ಪಡೆದಿವೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ನಂದಿನಿ ನದಿ ಆವರಿಸಿದ ದೃಶ್ಯ ಮನಮೋಹಕವಾಗಿದೆ. ನಂದಿನಿ ನದಿಯ ಅಬ್ಬರದ ಹರಿವಿನ ದೃಶ್ಯವು ಛಾಯಾಗ್ರಾಹಕ ನವೀನ್ ಕಟೀಲ್ ಅವರ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನಂದಿನಿ ನದಿಗೂ ಕಟೀಲು ಕ್ಷೇತ್ರಕ್ಕೂ ಪೌರಾಣಿಕ ನಂಟು ಇದೆ. ನಂದಿನಿ ನದಿ ಮಧ್ಯೆಯೇ ಶ್ರೀ ದುರ್ಗೆ ಉದ್ಭವಿಸಿದ್ದಾಳೆ. ಹೀಗಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಂದಿನಿ ನದಿಯ ಮಧ್ಯದಲ್ಲಿ ಇದ್ದು, ಇದೀಗ ಈ ನಂದಿನಿ ನದಿ ಭಕ್ತರ ಕಣ್ಮನ ಸೆಳೆಯುತ್ತಿದೆ.
ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?
Pradeep Eshwar : ಸುಧಾಕರ್ ಗೆ ಪ್ರತಿ ಸವಾಲೆಸೆದ ಶಾಸಕ ಪ್ರದೀಪ್ ಈಶ್ವರ್…!
Siddaramaiah : ಪ್ರಬುದ್ಧ ಕರ್ನಾಟಕ ಜನಮನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ