Banglore News: ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿಜುಲೈ 13 ರ ಗುರುವಾರ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್’ನ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ, ಡಿಸಿಎಂ ಡಿಕೆಶಿ ಮಾತನಾಡಿದರು. ಇಂದಿನ ಯುವ ಪೀಳಿಗೆಯೇ ದೇಶದ ಅಭಿವೃದ್ದಿಯ ಭರವಸೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳುವ ಉದ್ದೇಶದಿಂದ ನಮ್ಮ ಯುವ ಕಾಂಗ್ರೆಸ್ ಹುಟ್ಟಿದೆ.
ಇಂದಿನ ಯುವ ಕಾರ್ಯಕತರು ಪಕ್ಷ ನಮಗಾಗಿ ಏನು ಮಾಡಿದೇ ಎನ್ನುವುದರ ಬದಲಾಗಿ, ಪಕ್ಷಕ್ಕಾಗಿ ನಾವು ಏನು ಮಾಡಿದ್ದೇವೆ ಎನ್ನುವುದನ್ನು ಅರಿತುಕೊಳ್ಳಬೇಕು. ಇದೇ ತಿಂಗಳ 26, 27 ಹಾಗೂ 28ನೇ ತಾರೀಖು ಒಂದು ರಾಷ್ಟ್ರಿಯ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಕಾರ್ಯಕ್ರಮದಿಂದ ಇಡೀ ದೇಶಕ್ಕೆ ಕರ್ನಾಟಕ ರಾಜ್ಯದಿಂದ ಒಂದು ದೊಡ್ಡ ಸಂದೇಶ ಸಾರಬೇಕು.
ಈ ನಿಟ್ಟಿನಲ್ಲಿ ಯುವ ಕಾರ್ಯಕರ್ತರು ಸೇವಾ ಮನೋಭಾವನೆಯಿಂದ ಈ ಕಾರ್ಯಕ್ರಮಕ್ಕಾಗಿ ಶ್ರಮವಹಿಸಿ ಕೆಲಸ ಮಾಡಬೇಕು. ಅಲ್ಲದೆ ಪಕ್ಷದ ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸಬೇಕು ಎಂದು ನೆರದಿದ್ದ ಯುವ ಕಾರ್ಯಕರ್ತರಿಗೆ ತಿಳಿಸಿದರು.
Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ