ಬೆಂಗಳೂರು: ಬೆಂಗಳೂರಿನ ವಿವಿ ಪುರಂ ಠಾಣಾ ಪೋಲಿಸರು ಇಲ್ಲೊಬ್ಬ ಕಳ್ಳನನ್ನು ಹಿಡಿದುಕೊಂಡಿದ್ದಾರೆ. ಬೇಟೆಯಾಡಿದರೆ ಹುಲಿಯನ್ನೇ ಬೇಟೆಯಾಡಬೇಕು ಎಂದು ತಿಳಿದ ಕಳ್ಳ ದೊಡ್ಡ ಕಳ್ಳತನಕ್ಕೆ ಕೈ ಹಾಕಿ ಕೊನೆಗೆ ಪೊಲೀಸರ ವಶದಲ್ಲಿದ್ದಾನೆ . ಇವನೊಬ್ಬ ಲಾರಿ ಕಳ್ಳ.
ನಾವೆಲ್ಲರು ಸರಗಳ್ಳರು ಬೈಕ್ ಕಳ್ಳರು ಹಣ ದರೋಡೆ ಮಾಡುವವರನ್ನು ನೋಡಿದ್ದೇವೆ ಆದರೆ ಇಲ್ಲೊಬ್ಬ ಕಳ್ಳ ಒಮ್ಮಮೆ ಶ್ರೀ ಮಂತ ಆಗಬೇಕಂತ ಒಮ್ಮೆಲೆ ಲಾರಿ ಕಳ್ಳತನಕ್ಕೆ ಕೈ ಹಾಕಿದ್ದಾನೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಮುತ್ತು ಎನ್ನುವ ವ್ಯಕ್ತಿ ಲಾರಿಯ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದಾನೆ. ನಂತರ ಒಂದು ತಂಡವನ್ನು ಕಟ್ಟಿಕೊಂಡು ಲಾರಿ ಕಳ್ಲತನಕ್ಕೆ ಇಳಿದಿದ್ದಾನೆ .
ಬೆಂಗಳೂರಿನಿಂದ ಚೆನೈಗೆ ತೆರಳುತ್ತಿರುವ ಲಾರಿಗಳೇನಾದರೂ ನಗರದ ಹೊರಗಡೆ ಸಿಸಿಟಿವಿ ಎರದ ಕಡೆಗಳಲ್ಲೇನಾದರೂ ಲಾರಿಗಳನ್ನು ನಿಲ್ಲಿಸಿದರೆ ಅವುಗಳನ್ನು ಕದ್ದು ಮಾರಾಟ ಮಾಡುತಿದ್ದನು ಒಂದೊಂದು ಬಾರಿ ಮೊದಲೇ ಗಿರಾಕಿಗಳನ್ನು ಹುಡುಕಿಕೊಂಡು ಕಳ್ಳತನ ಮಾಡಿ ನಂತರ ದಾಖಲೆಗಳನ್ನು ಬದಲಾವಣೆ ಮಾಡಿ ಮಾರಾಟ ಮಾಡುತಿದ್ದ ದಾಖಲೆಗಳನ್ನು ಬದಲಾವಣೆ ಮಾಡುವುದಕ್ಕಾಗಿಯೇ ಒಂದು ತಂಡವನ್ನು ಸಿದ್ದಪಡಿಸಿಕೊಂಡಿದ್ದನು .
ನಂತರ ಲಾರಿ ಕಳೆದುಕೊಂಡ ಮಾಲಿಕರು ವಿವಿಪುರಂ ಠಾಣೆ ಗೆ ದೂರನ್ನು ದಾಖಲಿಸಿಕೊಂಡು ಮುತ್ತುವನ್ನು ಬಂದಿಸಿದ್ದಾರೆ, ಈಗ ತಂಡದವರನ್ನು ಸಿಸಿಟಿವಿ ಮೂಲಕ ಪತ್ತಿಹಚ್ಚುತಿದ್ದಾರೆ.
hubli Police- ಖಾಕಿಗೆ ತಲೆನೋವಾದ ವೈರಲ್ ವಿಡಿಯೋ: ಹೇಯ ಕೃತ್ಯ ಬಚ್ಚಿಟ್ಟರಾ ಪೋಲಿಸರು..?