Hassan News :ಹಾಸನದಲ್ಲಿ ಗಹೃಲಕ್ಷ್ಮೀ ಯೋಜನೆಗೆ ಸ್ಟಾರ್ಟಿಂಗ್ ಟ್ರಬಲ್ ಬಂದೊದಗಿದೆ. ಮೊದಲ ದಿನವೇ ಯೋಜನೆಗೆ ಸರ್ವರ್ ಕಂಟಕ ಎದುರಾಗಿದೆ. ಸರ್ವರ್ ಡೌನ್ ಸಮಸ್ಯೆ ಕಾಡುತ್ತಿದೆ. ಹಾಸನ ನಗರದ ನಗರಸಭೆ ಆವರಣದಲ್ಲಿರೋ ಸೆಂಟರ್ ನಲ್ಲಿ ಸರ್ವರ್ ಸಮಸ್ಯೆ ಕಂಡು ಬಂದು ಬೆಳಗ್ಗೆಯಿಂದ ಸಿಬ್ಬಂದಿಗಳು ಕೇವಲ ಆರು ಅಪ್ಲಿಕೇಶನ್ ಮಾತ್ರ ಹಾಕಿದ್ದಾರೆ. ಈ ಕಾರಣದಿಂದ ಬೆಳಗ್ಗಿನಿಂದಲೇ ನಿಂತಲ್ಲೇ ನಿಂತು ಸುಸ್ತಾಗಿ ಹೋಗಿದ್ದಾರೆ.
ಇನ್ನು ಸರ್ವರ್ ಡೌನ್ ಇದೆ ಇಂದು ಅಪ್ಲಿಕೇಷನ್ ತೆಗೆದುಕೊಳ್ಳಲಾಗುತ್ತಿಲ್ಲ ನಾಳೆ ಬನ್ನಿ ಎಂದು ಬಂದಿರುವ ಮಹಿಳೆಯರನ್ನು ಸಿಬ್ಬಂಧಿಗಳು ವಾಪಸ್ಸು ಕಳುಹಿಸುತ್ತಿದ್ದಾರೆ. ಇದರಿಂದ ಕೋಪಗೊಂನಡ ಮಹಿಳೆಯರು ಇದೇನು ಮೊದಲ ದಿನವೇ ಹೀಗಾದರೆ ಹೇಗೆ ಎಂಬುವುದಾಗಿ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ.
ಇನ್ನು ನಿನ್ನೆಯಷ್ಟೇ ಅಂದರೆ ಜುಲೈ 19ರಂದು ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದ್ದು ಇದೀಗ ಮೊದಲ ದಿನವೇ ಹಾಸನದಲ್ಲಿ ಯೋಜನೆಗೆ ಸ್ಟಾರ್ಟಿಂಗ್ ಟ್ರಬಲ್ ಬಂದಿರೋದ್ರಿಂದ ಜನ ಕೊಂಚ ಬೇಸರವಾಗಿದ್ದಾರೆ. ಮಹಿಳೆಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
Bulls- ಹತ್ತು ಗಂಟೆಯಲ್ಲಿ 18 ಎಕರೆ ಭೂಮಿಯನ್ನು ಉಳುಮೆ ಮಾಡಿದ ಜೋಡೆತ್ತುಗಳು