ಹುಬ್ಬಳ್ಳಿ: ಬೆಳ್ಳಂಬೆಳ್ಳಿಗ್ಗೆ ಮನೆಯ ಮುಂದೆ ಕಸ ಗುಡಿಸುವಾಗ ಮಹಿಳೆಯ ಚಿನ್ನದ ಸರ ಎಗರಿಸಿ ಬೈಕ್ ನಲ್ಲಿ ಪರಾರಿಯಾದ ಘಟನೆ ಪಟ್ಟಣದ ಆನಂದ ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಆನಂದ ನಗರದಲ್ಲಿ ಬೆಳಗಿನ ಜಾವ ಮಹಿಳೆಯೊಬ್ಬಳು ಮನೆಯ ಮುಂದೆ ಕಸ ಗೂಡಿಸುವ ವೇಳೆ ಬೈಕ್ ನಲ್ಲಿ ಬಂದ ಖದೀಮರು ಕೊರಳಲ್ಲಿರುವ 30 ಗ್ರಾಂ ಚಿನ್ನದ ಸರವನ್ನು ಎಗರಿಸಿಕೊಂಡು ಪರಾರಿಯಾಗಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಸರ ಕದಿಯುತ್ತಿದ್ದಂತೆ ಮಹಿಳೆ ಬೈಕ್ ಹಿಂದೆ ಓಡಿಹೋಗಿದ್ದಾಳೆ ಆದರೆ ಕಳ್ಳರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Rain : ಸೆಪ್ಟೆಂಬರ್ 18ರವರೆಗೆ ರಾಜ್ಯದ ಬಹತೇಕ ಕಡೆ ಭಾರಿ ಮಳೆ ಮುನ್ಸೂಚನೆ..!



