ಮಂಡ್ಯದಲ್ಲಿ ಜ್ಯೂಸ್ ಕುಡಿದು ಹಣ ನೀಡದೇ ಹುಚ್ಚಾ ವೆಂಕಟ್ ರಂಪಾಟ..!

ಮಂಡ್ಯ: ಮಂಡ್ಯದಲ್ಲಿ ಜ್ಯೂಸ್ ಕುಡಿದ ಹುಚ್ಚಾ ವೆಂಕಟ್, ಹಣ ನೀಡದೇ ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಹುಚ್ಚಾ ವೆಂಕಟ್ ಶ್ರೀರಂಗಪಟ್ಟಣದಲ್ಲಿ ಎರಡು ಮೂರು ದಿನಗಳಿಂದ ಅಲೆದಾಡುತ್ತಿದ್ದ. ಇಂದು ಕಬ್ಬಿನ ಜ್ಯೂಸ್ ಅಂಗಡಿಗೆ ತೆರಳಿ ಜ್ಯೂಸ್ ಕುಡಿದು ಹಣ ಕೊಡದೆ ರಂಪಾಟ ಮಾಡಿದ್ದಾರೆ. ಬಳಿಕ ಹಣ ಕೇಳಿದ ಜ್ಯೂಸ್ ಅಂಗಡಿಯವನ ಮೇಲೆ ಹುಚ್ಚಾ ವೆಂಕಟ್ ಹಲ್ಲೆ ನಡೆಸಿದ್ದಾರೆ. ಹುಚ್ಚಾ ವೆಂಕಟ್ ಹುಚ್ಚಾಟಕ್ಕೆ ಸಾರ್ವಜನಿಕರು ಗೂಸಾ ನೀಡಿದ್ದಾರೆ.

About The Author