Sunday, June 22, 2025

Latest Posts

ಮೈಕ್ರೋ ಫೈನಾನ್ಸ್ ಗಳ ಸಾಲ ಮನ್ನಾ ಮಾಡುವಂತೆ ಒತ್ತಾಯ

- Advertisement -

ಕರ್ನಾಟಕ ಟಿವಿ ಮಂಡ್ಯ : ರಾಜ್ಯಾದ್ಯಂತ ಖಾಸಗಿ ಹಣಕಾಸು ಸಂಸ್ಥೆಗಳು ಮಹಿಳಾ ಸಂಘ ಗಳನ್ನು ರಚಿಸಿ ಸಾವಿರಾರು ಕೋಟಿ ಹಣವನ್ನು ಸಾಲದ ರೂಪದಲ್ಲಿ ಹೂಡಿಕೆ ಮಾಡುವುದು ಎಲ್ಲರಿಗೂ ತಿಳಿದಿದೆ. ಕಳೆದ ಮೂರು ತಿಂಗಳಿನಿಂದ ಕೊರೊನಾ ಸಂಕಷ್ಟದ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿತ್ತು. ಪರಿಣಾಮ ಯಾವುದೇ ಉದ್ದಿಮೆ, ವಹಿವಾಟು, ಉದ್ಯೋಗ ಮಾಡಲು ಸಾಧ್ಯವಾಗಿಲ್ಲ. ಬಹುತೇಕ ಮಹಿಳಾ ಸಂಘಗಳ ಸಾಲಗಾರ ಅತ್ಯಂತ ಈ ಮೂರು ತಿಂಗಳಲ್ಲಿ ದೈನಂದಿನ ಜೀವನ ನಿರ್ವಹಿಸುವುದೇ ದುಸ್ತರವಾಗಿದೆ. ಹೀಗಿರುವಾಗ ಖಾಸಗಿ ಹಣಕಾಸು ಸಂಸ್ಥೆಗಳು ಬಾಕಿ ಇರುವ ಕಂತುಗಳನ್ನು ಕಟ್ಟುವಂತೆ ಒತ್ತಡ ಹೇರುತ್ತಿರುವುದು ಅಮಾನವೀಯವಾಗಿದೆ. ಇದಲ್ಲದೆ, ಆರ್‌ಬಿಐ ಸಹ ಸೆಪ್ಟೆಂಬರ್ ಕೊನೆಯವರೆಗೂ ಯಾವುದೇ ಸಾಲದ ಕಂತನ್ನು ವಸೂಲು ಮಾಡದಂತೆ ಹಾಗೂ ಸೆಪ್ಟೆಂಬರ್‌ವರೆಗೂ ಕಂತು ಕಟ್ಟಲು ಅವಕಾಶ ನೀಡಿದೆ. ಆದಾಗ್ಯೂ ಖಾಸಗಿ ಫೈನಾನ್ಸ್ಗಳ ಪ್ರತಿನಿಧಿಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡಾವಣೆಗಳಿಗೆ ತೆರಳಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ, ತಮಗೆ ಎಚ್ಚರಿಸುವುದು ಏನೆಂದರೆ ಈ ಕೂಡಲೇ ಆರ್‌ಬಿಐ ಆದೇಶದಂತೆ ಸಾಲ ವಸೂಲಿಗೆ ಯಾವುದೇ ಒತ್ತಡ ವನ್ನು ನಿಲ್ಲಿಸುವುದು. ಯಾವುದೇ ಬ್ಯಾಂಕು ಖಾಯಂ ನೌಕರ ಹೀಗೆ ಸಾಂಸ್ಥಿಕ ರಚನೆ ಮಾಡಿಕೊಳ್ಳದೆ ಬಿಡಿಗಾಸಿನ ಸಂಬಳ ಕೊಟ್ಟು ಪ್ರತಿನಿಧಿಗಳು ಹೆಸರಿನಲ್ಲಿ ಸಾವಿರಾರು ಕೋಟಿ ಬಿಚ್ಚುತ್ತಿರುವ ಹಣಕಾಸು ಸಂಸ್ಥೆಗಳು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಭಾಗವಾಗಿ ಎಲ್ಲಾ ಮಹಿಳಾ ಸಾಲಗಾರರ ತಲಾ 25 ಸಾವಿರದವರೆಗೆ ಸಾಲವನ್ನು ಮನ್ನಾ ಮಾಡುವಂತೆ, ತಪ್ಪಿದಲ್ಲಿ ನಿಮ್ಮ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಕರುನಾಡ ಸೇವಕರು  ಸಂಘಟನೆಯಿಂದ ಎಂಬಿ  ನಾಗಣ್ಣ ಗೌಡ ನೇತೃತ್ವದ ತಂಡ ಒತ್ತಾಯ ಮಾಡಿದೆ.

ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=Yjc7GC_y-2w
- Advertisement -

Latest Posts

Don't Miss