ಪ್ರಪಂಚದಲ್ಲಿ ಬೈಕ್, ಕಾರು, ಬಸ್, ಹಡಗು, ವಿಮಾನಗಳ ಮಾಲೀಕರನ್ನು ನೋಡಿದ್ದೀವಿ.. ಆದ್ರೆ ಹಳಿ ಮೇಲೆ ಓಡೋ ರೈಲಿಗೆ ಓನರ್ ಯಾರು ಇರ್ತಾರೆ ಅಂತಾ ಗೊತ್ತಾ? ಭಾರತದಲ್ಲಿ ಸಾಮಾನ್ಯ ರೈತನೊಬ್ಬ ಈಗ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಮಾಲೀಕನಾಗಿದ್ದಾನೆ.. ಕೇಂದ್ರ ಸರ್ಕಾರ ನಡೆಸೋ ಈ ರೈಲು ಸಾಮಾನ್ಯ ರೈತನಿಗೆ ಸಿಕ್ಕಿದ್ದು ಹೇಗೆ? ರೈಲಿನ ಮಾಲೀಕ ಆಗಿದ್ದು ಹೇಗೆ ಅನ್ನೋದನ್ನ ತೋರಿಸ್ತೀವಿ ಇಂದಿನ ವಿಡಿಯೋದಲ್ಲಿ..
ಭಾರತೀಯ ರೈಲ್ವೆ, ಭಾರತ ಸರ್ಕಾರದ ಒಂದು ಭಾಗ. ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ರೂ, ಎಷ್ಟೇ ಹಣವಿದ್ರೂ ಖಾಸಗಿ ವಿಮಾನ, ಹೆಲಿಕಾಪ್ಟರ್, ಹಡಗು ಸೇರಿದಂತೆ ಇತರ ಯಾವುದೇ ವಾಹನ ಖರೀದಿಸಬಹುದು. ಆದ್ರೆ ರೈಲು ಖರೀದಿಗೆ ಯಾವುದೇ ಪರ್ಮಿಶನ್ ಇಲ್ಲ. ಆದ್ರೆ ಅಚ್ಚರಿ ವಿಷ್ಯ ಅಂದ್ರೆ ರೈಲ್ವೇ ಇಲಾಖೆಯ ಸಣ್ಣ ಮಿಸ್ಟೇಕ್ನಿಂದ ಇಲ್ಲೊಬ್ಬ ಸಾಮಾನ್ಯ ರೈತ ಶತಾಬ್ದಿ ಎಕ್ಸ್ಪ್ರೆಸ್ ಟ್ರೈನ್ ಮಾಲೀಕನಾಗಿದ್ದಾನೆ.
ಹೌದು ಇದು ನಿಜಕ್ಕೂ ಅಚ್ಚರಿಯ ಸಂಗತಿ.. ಈ ಘಟನೆ ನಡೆದಿರೋದು 2017ರಲ್ಲಿ . ದೆಹಲಿ-ಅಮೃತ್ಸರ ನಡುವೆ ಸಂಚರಿಸುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಸಂಪುರನ್ ಸಿಂಗ್ ಎಂಬ ಸಾಮಾನ್ಯ ರೈತ ಮಾಲೀಕನಾಗಿದ್ದ. ಈ ರೈತ ರೈಲಿನ ಮಾಲೀಕನಾಗಲು ಮುಖ್ಯ ಕಾರಣ ರೈಲ್ವೇ ಇಲಾಖೆಯ ಯಡವಟ್ಟು
.
2007ರಲ್ಲಿ ಲುಧಿಯಾನದಲ್ಲಿ ರೈಲ್ವೆ ಇಲಾಖೆ ಹಳಿ ಕಾಮಗಾರಿಯನ್ನ ಪ್ರಾರಂಬಿಸಿದ್ರು . ಇದೇ ವೇಳೆ ರೈಲ್ವೇ ಇಲಾಖೆ ಹಲವರ ಜಮೀನನ್ನು ವಶಪಡಿಸಿಕೊಂಡಿತ್ತು. ಲುಧಿಯಾನದ ಕಟಾನ ಗ್ರಾಮದ ಸಂಪುರನ್ ಸಿಂಗ್ ಜಮೀನನ್ನೂ ಕೂಡ ಪ್ರತಿ ಎಕರೆ ಗೆ 25 ಲಕ್ಷ ಹಣ ಕೊಟ್ಟು ಸ್ವಾಧೀನಪಡಿಸಿದಕೊಳ್ಳಲಾಗಿತ್ತು.. ವಿಶೇಷ ಅಂದ್ರೆ ಅಸಲಿ ಆಟ ಶುರುವಾಗಿದ್ದೇ ಇಲ್ಲಿಂದ, ಪಟ್ಟಣದಿಂದ ದೂರವಿದ್ದ ಗ್ರಾಮದಲ್ಲಿ, ಫಲವತ್ತತೆ ಕಡಿಮೆ ಇದ್ದ ಜಮೀನಿಗೆ ರೈಲ್ವೇ ಇಲಾಖೆ ಪ್ರತಿ ಎಕರೆಗೆ 71 ಲಕ್ಷ ರೂಪಾಯಿ ನೀಡಿ ಸ್ವಾಧೀನಪಡಿಸಿಕೊಂಡಿತ್ತು. ಆದ್ರೆ ಸಂಪುರನ್ ಸಿಂಗ್ ಫಲವತ್ತಾದ ಭೂಮಿಗೆ ಕೇವಲ 25 ಲಕ್ಷ ಪರಿಹಾರ ನೀಡಿತ್ತು.. ಈ ವಿಷ್ಯ ಗೊತ್ತಾಗ್ತಿದ್ದಂತೆ, ಸಂಪುರನ್ ಸಿಂಗ್ ಕೆಂಡಕಾರಿದ್ದಾನೆ. ತನಗೆ ನೀಡಿದ್ದ ಪರಿಹಾರ ಮೊತ್ತದಲ್ಲಿ ವಂಚನೆ ಮಾಡಲಾಗಿದೆ ಅಂತ ಸಂಪೂರನ್ ಕೋರ್ಟ್ ಮೆಟ್ಟಿಲೇರಿದ್ರು.. ಕೋರ್ಟ್ ತೀರ್ಪು ಸಂಪುರನ್ ಪರ ಬಂದಿತ್ತು.. ಅದರಂತೆ ರೈಲ್ವೆ ಇಲಾಖೆ ಸಂಪುರನ್ ಸಿಂಗ್ಗೆ 1.47 ಕೋಟಿ ಕೊಡಬೇಕಿತ್ತು. ಆದ್ರೆ ರೈಲ್ವೆ ಇಲಾಖೆ ಸಂಪುರನ್ ಸಿಂಗ್ಗೆ ಕೊಟ್ಟಿದ್ದ ಬರೀ 40 ಲಕ್ಷ. ಬಾಕಿ 1 ಕೋಟಿಗೂ ಹೆಚ್ಚು ಹಣವನ್ನ ಇಲಾಖೆ ಕೊಟ್ಟಿರಲೇ ಇಲ್ಲ. ಇದೇ ವೇಳೆ ರೈತ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದ, ಆಗ ಕೋರ್ಟ್, ಲೂಧಿಯಾನ ರೈಲ್ವೆ ಸ್ಟೇಷನ್ ಹಾಗೂ ಆಫೀಸ್ ಜಪ್ತಿಗೆ ಆದೇಶಿಸಿತ್ತು
ಇದೇ ಟೈಮ್ ಕಾಯ್ತಿದ್ದ ರೈತ ಸಂಪುರಣ್ ಸಿಂಗ್ ಕೋರ್ಟ್ ಆದೇಶ ಪ್ರತಿ ಹಿಡಿದು ಲುಧಿಯಾನ ರೈಲ್ವೆ ಸ್ಟೇಷನ್ಗೆ ಬಂದಿದ್ದ. ಅಲ್ಲಿದ್ದ ಅಮೃತಸರ ಸ್ವರ್ಣ ಶತಾಬ್ಧಿ ಎಕ್ಸ್ಪ್ರೆಸ್ ರೈಲನ್ನು ಜಪ್ತಿ ಮಾಡಿದ್ದ. ಇಡೀ ಲುಧಿಯಾನ ಸ್ಟೇಷನ್ ಆಗ ರೈತ ಸಂಪುರಣ್ ಸಿಂಗ್ ಕಂಟ್ರೋಲ್ನಲ್ಲಿತ್ತು.. ಹೀಗಾಗಿ ಶತಾಬ್ಧಿ ಎಕ್ಸ್ಪ್ರೆಸ್ ಕೂಡ ರೈತನ ಪಾಲಾಗಿತ್ತು.. ಇದರಿಂದ ಇಡೀ ದೇಶದಲ್ಲಿ ರೈಲಿನ ಮಾಲೀಕನಾಗಿದ್ದು ಏಕೈಕ ವ್ಯಕ್ತಿ ಅನ್ನೋ ಬಿರುದು ಪಡೆದುಕೊಂಡಿದ್ದಾನೆ.. ಇದಾದ್ಮೇಲೆ ರೈಲ್ವೆ ಅಧಿಕಾರಿಗಳು ರೈಲು ಬಿಡಿಸಿಕೊಳ್ಳಲು ಮತ್ತೆ ಕೋರ್ಟ್ ಮೆಟ್ಟಿಲೇರಿದ್ರು. ಸುಮಾರು ದಿನಗಳ ಕಾಲ ಆ ರೈಲು ರೈತನ ವಶದಲ್ಲೇ ಇತ್ತು.. ರೈಲ್ವೆ ಇಲಾಖೆ ರೈತನಿಗೆ ಬರಬೇಕಿದ್ದ ಪೂರ್ತಿ ಹಣವನ್ನು ನೀಡಿ ರೈಲು ಹಾಗೂ ರೈಲು ನಿಲ್ದಾಣವನ್ನ ವಾಪಸ್ ಪಡೆದುಕೊಂಡಿದೆ.