ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ KSRTC ಬಸ್ ಹರಿದು 2 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ಯಾಹ್ನ 11:40 ರ ಸುಮಾರಿಗೆ ಜರುಗಿದೆ. ಬಸ್ ನಿಲ್ದಾಣದ ಪಕ್ಕದಲ್ಲೇ ಪರಸಪ್ಪರ ಮನೆಯಿದ್ದು, ಅಜ್ಜಿ ಮನೆಯಂಗಳದಲ್ಲಿ ಮಗುವನ್ನು ಆಟವಾಡಿಸುತ್ತಾ ಕುಳಿತಿದ್ದರು.
ಈ ಮಧ್ಯೆ ಅಜ್ಜಿ ಕಣ್ತಪ್ಪಿಸಿ ಮಗು ಬಸ್ ನಿಲ್ದಾಣ ಕಡೆಗೆ ಹೋಗಿದೆ. ಅದೇ ವೇಳೆ ನಿಲ್ದಾಣಕ್ಕೆ ಬಂದು ನಿಲುಗಡೆಯಾಗುತ್ತಿದ್ದ ಬಸ್ಸಿನ ಚಕ್ರದಡಿಗೆ ಸಿಲುಕಿ, ಸ್ಥಳದಲ್ಲೇ ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ. ಪರಸಪ್ಪ ಹುಣಸ್ಯಾಳ ಅವರ 2 ವರ್ಷದ ಮಗು ಲಕ್ಷ್ಮಿ ಮೃತ ಬಾಲಕಿಯಾಗಿದ್ದು.
ಕೂಡಲಗಿ ಗ್ರಾಮದಿಂದ ಸುರಪುರಕ್ಕೆ ಹೊರಟಿರುವ KA 33 F 0346 ಬಸ್ ನ ಎರಡು ಚಕ್ರಗಳು ಮಗುವಿನ ಮೇಲೆ ಹರಿದಿದ್ದು ದೇಹ ಛಿದ್ರ ಛಿದ್ರಗೊಂಡಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು,ಈ ಕುರಿತು ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಾವಣ್ಯ ಅನಿಗೋಳ

