www.karnatakatv.net : ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯದ ಬಾಚಹಳ್ಳಿ ಗ್ರಾಮ ಸಮೀಪದ ದೊಡ್ಡ ಬೆಟ್ಟದಲ್ಲಿ ಕಳೆದ ಒಂದು ತಿಂಗಳುಗಳಿಂದ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗಜಪಡೆಯ ಸಹಾಯದೊಂದಿಗೆ ಕೂಂಬಿಂಗ್ ಕಾರ್ಯಚರಣೆಗೆ ಅರಣ್ಯ ಇಲಾಖೆ ಇಳಿದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಮದ ಸುತ್ತಮುತ್ತ ಜಾನುವಾರುಗಳನ್ನು ಭೇಟೆಯಾಡುತ್ತಿರುವ ವ್ಯಾಘ್ರನ ಅಟ್ಟಹಾಸಕ್ಕೆ ಜನರು ಭಯಬೀತರಾಗಿದ್ದರು. ಇದಾದ ಬಳಿಕ ಗ್ರಾಮದ ಸಮೀಪವೇ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆ ಸೆರೆಹಿಡಿಯಲು ಬೋನ್ ಇರಿಸಲಾಗಿತ್ತಾದರು ಬಲೆಗೆ ಬೀಳದ ಹುಲಿಯು ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದು ಹುಲಿಯ ಸೆರೆಗಾಗಿ ನಾಗರಹೊಳೆ ಅಭಯಾರಣ್ಯದ ಅಭಿಮನ್ಯು, ಮಹೇಂದ್ರ, ರಾಂಪುರದ ಮೂರು ಆನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪ್ರಸಾದ್ ಕರ್ನಾಟಕ ಟಿವಿ ಗುಂಡ್ಲುಪೇಟೆ




