Friday, July 4, 2025

Latest Posts

ಎಲ್ಲೂ ಸಂಭ್ರಮವಿಲ್ಲ: ಅಣ್ಣನ ಅಗಲಿಕೆಯ ದುಃಖದಲ್ಲಿರುವ ಧ್ರುವನಿಗಿಲ್ಲ ಬರ್ತ್‌ಡೇ ಸಂಭ್ರಮ..!

- Advertisement -

ಇಂದು ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಆದ್ರೆ ಕೊರೊನಾ ಭೀತಿ ಮತ್ತು ಅಣ್ಣನ ಅಗಲಿಕೆಯ ನೋವಲ್ಲಿರುವ ಧ್ರುವ ಸರ್ಜಾ ಈ ಬಾರಿ ಹುಟ್ಟುಹಬ್ಬವನ್ನ ಆಚರಣೆ ಮಾಡಲಿಲ್ಲ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಧ್ರುವ ತಮ್ಮ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಅಭಿಮಾನಿಗಳೇ ನಮ್ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ,ಅಭಿಮಾನ ವರ್ಣನಾತೀತ. ಈವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ ಎಂದು ಧ್ರುವ ಟ್ವೀಟ್ ಮಾಡಿದ್ದಾರೆ.

ನಿನ್ನೆ ಮತ್ತು ಇಂದು ನಟಿ ಮತ್ತು ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಸೀಮಂತ್ ಕಾರ್ಯ ಮಾಡಲಾಯಿತು. ನಿನ್ನೆ ಮನೆಯಲ್ಲೇ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ್ರೆ, ಇಂದು ಫ್ಯಾಮಿಲಿ ಫ್ರೆಂಡ್ಸ್ ಕರೆಸಿ, ಬೆಂಗಳೂರಿನ ಹೊಟೇಲ್ ಒಂದರಲ್ಲಿ ಬೇಬಿ ಶವರ್ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬಸ್ಥರು, ಪ್ರಜ್ವಲ್ ದೇವರಾಜ್ ದಂಪತಿ, ಸೇರಿ ಕೆಲ ಸ್ನೇಹಿತರು ಭಾಗವಹಿಸಿದ್ದರು.

ಇನ್ನು ಇದೇ ವರ್ಷ ಜೂನ್ 7ರಂದು ಚಿರು ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು.

- Advertisement -

Latest Posts

Don't Miss