Thursday, October 30, 2025

Latest Posts

ನಟ ಪೃಥ್ವಿರಾಜ್​ ಸುಕುಮಾರನ್ ಗೆ ಕೇರಳ ಹೈಕೋರ್ಟ್​ ರಿಲೀಫ್

- Advertisement -

ತಮ್ಮ ಮೇಲೆ ಎಫ್​ಐಆರ್​ ಹಾಕಿರುವುದನ್ನು ಪ್ರಶ್ನಿಸಿ ಪೃಥ್ವಿರಾಜ್​ ಸುಕುಮಾರನ್​ ಅವರು ಕೇರಳ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದಿದ್ದು ಗುರುವಾರ  ತೀರ್ಪು ಪ್ರಕಟ ಆಗಿದೆ. ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’  ಸಿನಿಮಾಗೆ ಸಿಕ್ಕಂತಹ ಜನಸ್ಪಂದನೆ ತುಂಬ ದೊಡ್ಡದು. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಅನೇಕ ದಾಖಲೆಗಳನ್ನು ಬರೆಯಿತು. ಅದರ ಜೊತೆಗೆ ಒಂದಷ್ಟು ವಿವಾದಗಳು ಕೂಡ ಸುತ್ತಿಕೊಂಡವು. ಅತಿ ದೊಡ್ಡ ವಿವಾದ ಎದುರಾಗಿದ್ದು ‘ವರಾಹ ರೂಪಂ..’  ಹಾಡಿನ ಕಾರಣದಿಂದ. ಅಜನೀಶ್​ ಲೋಕನಾಥ್​ ಸಂಗೀತ ನೀಡಿದ ಈ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಎದುರಾಯಿತು.

ಅಷ್ಟೇ ಅಲ್ಲದೇ ಆ ಪ್ರಕರಣ ಕೋರ್ಟ್​ ಮೆಟ್ಟಿಲೇರಿತು ಕೂಡ. ಈ ಕೇಸ್​ನಲ್ಲಿ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ ​ ಕೂಡ ಸಮಸ್ಯೆ ಎದುರಿಸುವಂತಾಗಿದ್ದು ಅಚ್ಚರಿ. ಆದರೆ ಅವರಿಗೆ ಈಗ ರಿಲೀಫ್​ ಸಿಕ್ಕಿದೆ. ಅವರ ಮೇಲಿದ್ದ ಎಫ್​ಐಆರ್​ಗೆ ಕೇರಳ ಹೈಕೋರ್ಟ್​ ತಡೆ ನೀಡಿದೆ. ಮೊದಲು ಕನ್ನಡದಲ್ಲಿ ರಿಲೀಸ್​ ಆಗಿದ್ದ ‘ಕಾಂತಾರ’ ಚಿತ್ರವನ್ನು ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್​ ಮಾಡಿ ತೆರೆಕಾಣಿಸಲಾಯಿತು. ಕೇರಳದಲ್ಲಿ ಈ ಚಿತ್ರದ ಮಲಯಾಳಂ ವರ್ಷನ್​ ಬಿಡುಗಡೆ ಮಾಡಿದ್ದು ಖ್ಯಾತ ನಟ ಪೃಥ್ವಿರಾಜ್​ ಸುಕುಮಾರನ್​. ಅವರ ವಿತರಣಾ ಕಂಪನಿ ಮೂಲಕ ‘ಕಾಂತಾರ’ ರಿಲೀಸ್​ ಆಯಿತು. ‘ವರಾಹಂ ರೂಪಂ..’ ಹಾಡನ್ನು ಕಾಪಿ ಮಾಡಲಾಗಿದೆ ಎಂದು ಹಾಕಿದ್ದ ಕೇಸ್​ನಲ್ಲಿ ಪೃಥ್ವಿರಾಜ್​ ಸುಕುಮಾರನ್​​ ಅವರ ಹೆಸರನ್ನೂ ಸೇರಿಸಲಾಯಿತು.

ಬಳಿಕ ಎಫ್​ಐಆರ್​ ದಾಖಲಾಯಿತು. ತಮ್ಮ ಮೇಲೆ ಎಫ್​ಐಆರ್​ ಹಾಕಿರುವುದನ್ನು ಪ್ರಶ್ನಿಸಿ ಪೃಥ್ವಿರಾಜ್​ ಸುಕುಮಾರನ್​​ ಅವರು ಕೇರಳ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದಿದ್ದು ಗುರುವಾರ (ಫೆಬ್ರವರಿ 16) ತೀರ್ಪು ಪ್ರಕಟ ಆಗಿದೆ. ‘ಪೃಥ್ವಿರಾಜ್​ ಸುಕುಮಾರನ್​ ಅವರು ಈ ಸಿನಿಮಾವನ್ನು ವಿತರಣೆ ಮಾಡಿದ್ದಾರೆ ಅಷ್ಟೇ. ಅದಕ್ಕಾಗಿ ಕಾಪಿರೈಟ್​ ವಿಷಯದಲ್ಲಿ ಅವರನ್ನು ಅನಗತ್ಯವಾಗಿ ಎಳೆದು ತರಲಾಗಿದೆ’ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ಮುಂದಿನ 7 ದಿನಗಳ ಕಾಲ ಯಾವುದೇ ವಿಚಾರಣೆ ಮಾಡಬಾರದು ಎಂದು ತೀರ್ಪು ನೀಡಲಾಗಿದೆ. ‘ಕಾಂತಾರ 2’ ಮಾಡಲು ರಿಷಬ್​ ಶೆಟ್ಟಿ ಸಿದ್ಧತೆ:

ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಿಂದ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ. ಅವರು ಅವರು ‘ಕಾಂತಾರ 2’ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಜೂನ್​ ತಿಂಗಳಲ್ಲಿ ಇದರ ಶೂಟಿಂಗ್​ ಆರಂಭ ಆಗುವ ಸಾಧ್ಯತೆ ಇದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್​’ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಪಾತ್ರವರ್ಗಕ್ಕೆ ಹೊಸ ಕಲಾವಿದರು ಕೂಡ ಎಂಟ್ರಿ ಆಗಲಿದ್ದಾರೆ.

- Advertisement -

Latest Posts

Don't Miss