ಕನ್ನಡದ ಜೊತೆ ತೆಲುಗು ಭಾಷೆಯಲ್ಲಿ ನಟಿಸಿದ್ದ ಖ್ಯಾತ ನಟಿ ಮಾನ್ಯಾ. ಸಾಹಸಸಿಂಹ ವಿಷ್ಣುವರ್ಧನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶ್ರೀಮುರುಳಿ ಸೇರಿದಂತೆ ಕನ್ನಡದ ಹಲವಾರು ಸ್ಟಾರ್ ಹೀರೋಗಳ ಮಿಂಚಿದ ನಟಿ ಈಕೆ. ಅದ್ರಲ್ಲೂ ಮಾನ್ಯಗೆ ಹೆಸರು ತಂದುಕೊಟ್ಟಿದ್ದು, ದರ್ಶನ್ ಜೊತೆಗೆ ನಟಿಸಿದ ಶಾಸ್ತ್ರಿ ಸಿನಿಮಾ. ಈ ಚಿತ್ರದ ಮೂಲಕ ಜನರ ಗಮನವನ್ನು ಸೆಳೆದಿದ್ದ, ಮಾನ್ಯಾ ಕಳೆದ ಕೆಲವು ವರ್ಷಗಳಿಂದ ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದು, ದೂರ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಇವ್ರು, ಆಗಾಗ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಮಾನ್ಯ ತಾನು ಅನಾರೋಗ್ಯಕ್ಕೆ ತುತ್ತಾಗಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಮಾನ್ಯ ಕಳೆದ ಮೂರು ವಾರಗಳ ಹಿಂದೆ ನಾನು ಗಾಯಗೊಂಡಿದ್ದೆ. ಆಗ ನನ್ನ ದೇಹದ ಎಡಭಾಗ ಪಾರ್ಶ್ವ ವಾಯುವಿಗೆ ತುತ್ತಾಯಿತು. ನನ್ನ ಎಡಗಾಲು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಹೇಳಿದ್ದಾರೆ. ಬೆನ್ನಿಗೆ ಸ್ಟೀರಾಯ್ಡ್ ಇಂಜೆಕ್ಷನ್ ಅನ್ನು ನೀಡಲಾಗಿದೆ.

ಆಸ್ಪತ್ರೆಯಲ್ಲಿ ಕೋವಿಡ್ ಕಾರಣದಿಂದಾಗಿ ಯಾರಿಗೂ ಪ್ರವೇಶವನ್ನು ನೀಡುತ್ತಿಲ್ಲ. ನಾನು ಒಂಟಿಯಾಗಿದ್ದೇನೆ. ಆದಷ್ಟು ಬೇಗ ಗುಣಮುಖಳಾಗುವೆನೆಂದು ಭಾಗಿಸಿದ್ದೇನೆ. ನಾನು ಮೊದಲಿನ ಸ್ಥಿತಿಗೆ ಬರಲು ಪ್ರಯತ್ನ ಮಾಡುತ್ತಿದ್ದೇನೆ. ಕಳೆದ ಮೂರು ವಾರಗಳಿಂದಲೂ ಕೂಡಾ ಸರಿಯಾಗಿ ನಡೆಯಲು, ಕೂರಲು, ಮಲಗಲು ಆಗುತ್ತಿಲ್ಲವೆಂದು ಅವರು ಹೇಳಿದ್ದಾರೆ. ನಾನು ಮತ್ತೆ ಡಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ ಆದರೆ ವೈದ್ಯರು ನಿಧಾನವಾಗಿ ಚೇತರಿಸಿಕೊಂಡ ನಂತರ ಡಾನ್ಸ್ ಮಾಡಬಹುದು ಎಂದಿದ್ದಾರೆ.
