Gadaga News:
ಹೈಕಮಾಂಡ ಅವಕಾಶ ಕೊಟ್ರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಗದಗ ನಗರದಲ್ಲಿ ಹೇಳಿಕೆ ನೀಡಿದ್ದಾರೆ. ನಸೀಬನಾಗ ಇದ್ರೆ ನಾನೂ ಸಿಎಂ ಆಗೇ ಆಗ್ತೀನಿ ಎಂದು ಮತ್ತೆ ಸಿಎಂ ಖುರ್ಚಿ ಆಸೆಯನ್ನು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಬಿಚ್ಚಿಟ್ಟಿದ್ದಾರೆ. ಬಸವರಾಜ್ ಬೊಮ್ಮಾಯಿ ತೆಗೆದು ಆಗಲು ನಾನು ಸಿದ್ಧ ಇಲ್ಲ. ಏಕೆಂದರೆ ಅವರು ಉತ್ತರ ಕರ್ನಾಟಕವರು. ಆದರೆ ಅಖಂಡ ಕರ್ನಾಟಕದ ಸಿಎಂ ಆಗ್ತೀನಿ. ಸಿಎಂ ಸ್ಥಾನಕ್ಕೆ ಬೆನ್ನು ಹತ್ತಲ್ಲ. ಸಿಎಂ ಆಗೋ ಯೋಗ್ಯತೆ ಎಲ್ಲರಿಗೂ ಇದೆ. ಈಗ ಉತ್ತರ ಕರ್ನಾಟಕ ಬಸವರಾಜ್ ಬೊಮ್ಮಾಯಿ ಸಿಎಂ ಇದ್ದಾರೆ. ಒಂಬತ್ತು ಬಾರಿ ಶಾಸಕನಾಗಿದ್ದೇನೆ. ಎಂಟು ಇಲಾಖೆ ನಿಭಾಯಿಸಿದ್ದೇನೆ. ನಾನು ರಾಜ್ಯದ ಹಿರಿಯ ರಾಜಕಾರಣಿ. ಹುಕ್ಕೇರಿ ಜನ ನನ್ನ ಆಯ್ಕೆ ಮಾಡಿದ್ದಾರೆ. ಸೋಲಿಸಿದ್ರೆ ಮನೆಗೆ ಹೋಗ್ತೀನಿ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದರೆ ರಾಜೀನಾಮೆಗೂ ಸಿದ್ದ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ `ಪುನೀತ್’ ಉಪಗ್ರಹ ನ.15ರಿಂದ ಡಿ.31ರ ನಡುವೆ ಉಡಾವಣೆ
ಕೃಷಿ ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಣೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಮೋದಿ ಸೇರಿ ಯಾರಿಗೂ ಇಲ್ಲ – HD ಕುಮಾರಸ್ವಾಮಿ